ವಿಂಡೋಸೀಟ್‍ನಲ್ಲೊಂದು ಮರ್ಡರ್ ಮಿಸ್ಟ್ರಿ

ವಿಂಡೋಸೀಟ್ ಎಂದ ಕೂಡಲೇ ನಮಗೆ ಬಸ್ ಆಥವ ಟ್ರೈನ್ ಜರ್ನಿ ನೆನಪಾಗುತ್ತದೆ. ಈಗ ಅದೇ ಟೈಟಲ್ ನಡಿ ನಟಿ, ನಿರೂಪಕಿ ಶೀತಲ್ ಶೆಟ್ಟಿ ಅವರು ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಈ ವಿಂಡೋಸೀಟ್ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು, ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕಿ ಶಾಲಿನಿ ಮಂಜುನಾಥ್, ಶೀತಲ್ ಶೆಟ್ಟಿ, ನಾಯಕ ನಿರೂಪ್ ಭಂಡಾರಿ, ನಾಯಕಿ ಅಮೃತಾ ಅಯ್ಯಂಗಾರ್, ನಟ ಸೂರಜ್ ಹಾಗೂ ಚಿತ್ರತಂಡ ಹಾಜರಿತ್ತು.WhatsApp Image 2022 06 09 at 12.54.16 PM

ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದ ನಿರೂಪಕಿ ಶೀತಲ್‍ಶೆಟ್ಟಿ ಅವರು ಇದೇ ಮೊದಲಬಾರಿಗೆ ನಿರ್ದೇಶಿಸಿರುವ ಚಿತ್ರ ಇದಾಗಿದ್ದು, ಕಥೆ ಹಾಗೂ ಚಿತ್ರಕಥೆಯನ್ನು ಅವರೇ ಬರೆದಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬಿಗ್‍ಬಾಸ್ ಮನೆಯಿಂದ ಹೊರಬಂದಮೇಲೆ ಈ ಕಥೆ ರೆಡಿ ಮಾಡಿದೆ. ಸ್ನೇಹಿತರೆಲ್ಲ ನೀವೇ ಡೈರೆಕ್ಟ್ ಮಾಡಿ ಎಂಬ ಸಲಹೆ ನೀಡಿದರು. ನಂತರ ನಿರ್ಮಾಪಕರ ಹುಡುಕಾಟ ನಡೆಸುತ್ತಿದ್ದೆವು. ಯಾರೂ ಸಿಗಲಿಲ್ಲ ಒಮ್ಮೆ ಸುದೀಪ್‍ರನ್ನು ಕಂಡು ಯಾರಾದರೂ ನಿರ್ಮಾಪಕರು ಇದ್ರೆ ಹೇಳಿ ಎಂದಾಗ ಅವರು ಜಾಕ್ ಮಂಜು ಅವರನ್ನು ಸಜೆಸ್ಟ್ ಮಾಡಿದರು.
ಮಂಜಣ್ಣ ಅವರ ಬಳಿ ಈ ಕಥೆ ಹೇಳಿದೆ, ಒಂದಷ್ಟು ಕರೆಕ್ಷನ್ ಹೇಳಿ ಬಂಡವಾಳ ಹಾಕಲು ಸಿದ್ದರಾದರು. ಇನ್ನು ನಾಯಕನ ಪಾತ್ರಕ್ಕೆ ನಿರೂಪ್ ಅವರು ಒಪ್ತಾರೋ ಇಲ್ವೋ ಎಂಬ ಅನುಮಾನವಿತ್ತು. ಆದರೆ ಅವರು ಕಥೆ ಕೇಳಿದ ಕೂಡಲೇ ಹೊಸಬಳೆಂದು ಯೋಚಿಸದೆ ಗ್ರೀನ್ ಸಿಗ್ನಲ್ ಕೊಟ್ಟರು. ಹೀಗೆ ನಿರ್ಮಾಣವಾದ ಈ ಚಿತ್ರ ಜುಲೈ ಒಂದರಂದು ಬಿಡುಗಡೆಯಾಗುತ್ತಿದೆ ಎಂದರು,WhatsApp Image 2022 06 09 at 12.54.17 PM

ನಂತರ ನಿರ್ಮಾಪಕಿ ಶಾಲಿನಿ ಮಂಜುನಾಥ್ ಮಾತನಾಡಿ ನಮ್ಮ ಸಂಸ್ಥೆಯಿಂದ ಯಾವಾಗಲೂ ಹೊಸಬರಿಗೇ ಅವಕಾಶ ನೀಡುತ್ತ ಬಂದಿದ್ದೇವೆ. ಅದು ಲೈಫು ಇಷ್ಟೇನೇ, ಡೆಡ್ಲಿಸೋಮನೇ ಇರಬಹುದು. ಹೊಸಬರು ಬಂದಾಗ ಹೊಸ ಐಡಿಯಾ ಹೊರಬರುತ್ತದೆ, ಹೊಸತನ ಕೊಟ್ಟಾಗ ಜನನೂ ಮನೆಯಿಂದ ಹೊರಬರುತ್ತಾರೆ. ಈಗ ಒಬ್ಬ ಮಹಿಳೆಗೆ ಅವಕಾಶ ಕೊಟ್ಟಿದ್ದೇವೆ. ಶೀತಲ್ ಶೆಟ್ಟಿ ಅದ್ಭುತವಾಗಿ ಈ ಚಿತ್ರ ಮಾಡಿಕೊಟ್ಟಿದ್ದಾರೆ, ಫಸ್ಟ್ ಟೈಮ್ ನಿರ್ದೇಶನ ಮಾಡಿದ್ದಾರೆ ಅನಿಸುವುದೇ ಇಲ್ಲ.MV5BNzk0NTNiYzYtZGFlNi00NzZhLWIzMTUtMmZlMmRjY2U3MzZmXkEyXkFqcGdeQXVyMTA0NDUzNTQ4. V1 FMjpg UX1000
ಶೀತಲ್ ಅವರಂತೆಯೇ ನಮ್ಮ ಎಲ್ಲಾ ಹೆಣ್ಣುಮಕ್ಕಳು ಮುಂದೆ ಬರಬೇಕು, ಅವರು ಅಡುಗೆ ಮನೆಯಿಂದ ಹೊರಬರಬೇಕು. ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲೂ ಒಂದು ಶಕ್ತಿ ಇರುತ್ತದೆ ಇರುತ್ತದೆ. ನಮ್ಮ ಇಂಡಸ್ಟ್ರಿ ಈಗ ಪ್ರಪಂಚ ಮಟ್ಟದಲ್ಲಿ ಗುರ್ತಿಸಿಕೊಳ್ಳುತ್ತಿದೆ, ಅದಕ್ಕೆ ತಕ್ಕಂತೆ ನಾವು ಸಿನಿಮಾಗಳನ್ನು ಮಾಡಬೇಕಿದೆ ಎಂದರು.d67f9b1809b8720a1422adbfd2c5f585

ವಿಂಡೋಸೀಟ್ ಎಂದ ಕೂಡಲೇ ಇದೊಂದು ಬರೀ ಜರ್ನಿ ಕಥೆ ಅಂದುಕೊಳ್ಳಬೇಕಿಲ್ಲ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮಿಸ್ಟ್ರಿ ಕೂಡ ಇದರಲ್ಲಿದೆ. ಬಿಡುಗಡೆಯಾಗಿರುವ ಟ್ರೈಲರ್ ಸಿನಿಮಾದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಈ ಚಿತ್ರದ ವಿಶಿಷ್ಟ ಟ್ರೈಲರನ್ನು ನಟ ಕಿಚ್ಚ ಸುದೀಪ್ ಅವರು ಟ್ವಿಟರ್ ನಲ್ಲಿ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.

ತಾಳಗುಪ್ಪದಿಂದ ಸಾಗರದವರೆಗೆ ಟ್ರೈನ್‍ ನಲ್ಲಿ ಪ್ರಯಾಣಿಸುವ ನಾಯಕನ ಕಥೆ ಈ ಚಿತ್ರದಲ್ಲಿದೆ, ಮಲೆನಾಡು, ಅಲ್ಲಿನ ಜನರ ಜೀವನಶೈಲಿಯನ್ನು ಪರಿಚಯಿಸುವ ಜೊತೆಜೊತೆಗೆ ಒಂದು ಕುತೂಹಲಕರ ಮರ್ಡರ್ ಮಿಸ್ಟ್ರಿಯನ್ನು ಹೇಳಹೊರಟಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಜುಲೈ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.full

ನಟ ನಿರೂಪ್ ಭಂಡಾರಿ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ತಾಳಗುಪ್ಪದ ರಘು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘು ಒಬ್ಬ ಹಾಡುಗಾರ. ಆತನಿಗೆ ವಿಂಡೋಸೀಟೆಂದರೆ ಬಲು ಪ್ರೀತಿ, ಈತನ ವಿಂಡೋಸೀಟಿನ ವ್ಯಾಮೋಹವೇ ಈತನನ್ನು ದೊಡ್ಡದೊಂದು ಸಂಕಷ್ಟಕ್ಕೆ ತಳ್ಳುತ್ತದೆ. ಇದರ ಸುಳಿಯಿಂದ ರಘು ಪಾರಾಗುತ್ತಾನಾ ? ಇಲ್ಲವಾ ಕಟ್ಟುಪಾಡುಗಳಿಗೆ ಸಿಕ್ಕು ಸಂಕಷ್ಟಕ್ಕೆ ಸಿಲುಕುತ್ತಾನಾ? ಅನ್ನೋದು ವಿಂಡೋಸೀಟ್ ಸಿನಿಮಾದ ಮುಖ್ಯಕಥೆ. ಪ್ರೀತಿ, `ಇವನೆ, ನೋವು-ನಲಿವಿನ ಜೊತೆಗೆ ಒಂದು ಮರ್ಡರ್ ಮಿಸ್ಟ್ರಿ ಕಥೆ ಹೇಗೆ ಸಾಗುತ್ತೆ ಎನ್ನುವುದೇ ಚಿತ್ರದ ಕುತೂಹಲ.

ವಿಂಡೋಸೀಟ್ ಚಿತ್ರ ಈ ವೇಳೆಗಾಗಲೇ ಬಿಡುಗಡೆಯಾಗಿರಬೇಕಿತ್ತು. ಆದರೆ, ಚಿತ್ರೀಕರಣದ ನಡುವೆ ಕೊರೊನಾ, ಲಾಕ್ಡೌನ್ ಆದ ಕಾರಣ ಬ್ರೇಕ್‍ಆಗಿ ಸಿನಿಮಾದ ಚಿತ್ರೀಕರಣ ಕೊಂಚ ತಡವಾಗಿತ್ತು. ಈಗ ಚಿತ್ರತಂಡ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿದೆ. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ಚಿತ್ರದ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಹಾಗೂ ವಿಘ್ನೇಶ್‍ರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…