ವಿಲಕ್ಷಣ ಘಟನೆಗಳ ಸುತ್ತ ಹರಡಿಕೊಂಡ ವಿಕ್ರಾಂತ್ ರೋಣ!

vikranth rona movie review

Vikranth Rona 4/5

ಕನ್ನಡ ಚಿತ್ರರಂಗವನ್ನು ಬೇರೊಂದು ಲೆವೆಲ್ಲಿಗೆ ಕೊಂಡೊಯ್ಯಬಲ್ಲ, ಕರ್ನಾಟಕದ ಹಿರಿಮೆಯನ್ನು ಜಗತ್ತಿಗೇ ಸಾರುವ ತಾಕತ್ತಿರುವ ನಟ ಸುದೀಪ್. ಇಲ್ಲಿ ಸೂಪರ್ ಸ್ಟಾರ್ ಆಗಿರುವಾಗಲೇ ಕರ್ನಾಟಕದ ಗಡಿ ದಾಟಿ ಇಡೀ ಭಾರತೀಯ ಚಿತ್ರರಂಗವನ್ನು ಆವರಿಸಿದ ಮೊದಲ ನಟ ಸುದೀಪ್. ಈಗ ಅವರ ವಿಕ್ರಾಂತ್ ರೋಣ ಬಿಡುಗಡೆಯಾಗಿದೆ. ಈ ಸಲ ಸುದೀಪ್ ಜಾಗತಿಕ ಮಟ್ಟದಲ್ಲಿ ಗೆಲುವು ಕಾಣಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ವಿಕ್ರಾಂತ್ ರೋಣ ಮುನ್ನುಡಿ ಬರೆಯುತ್ತಾನಾ ಎನ್ನುವ ಪ್ರಶ್ನೆಗೆ ಉತ್ತರದಂತೆ ಮೂಡಿಬಂದಿರುವ ಸಿನಿಮಾ ವಿಕ್ರಾಂತ್ ರೋಣ…vikranth rona

ಬನ್ನಿ ಸಿನಿಮಾ ಹೇಗಿದೆ? ಅದರ ಹೂರಣವೇನು? ವಿಕ್ರಾಂತ್ ರೋಣ ಜನರಿಗೆ ಇಷ್ಟವಾಗ್ತಾನಾ ಅನ್ನೋದನ್ನು ಹೇಳ್ತೀನಿ

ಕರಾವಳಿಯಲ್ಲಿ ನಡೆಯುವ ಭೂತಾರಾಧನೆಯ ಸುತ್ತ ಒಂದೊಳ್ಳೆ ಕಥೆ ಕಟ್ಟಿ ʻರಂಗಿತರಂಗʼ ಎನ್ನುವ ಸಿನಿಮಾವನ್ನು ತೆರೆಗೆ ತಂದಿದ್ದವರು ನಿರ್ದೇಶಕ ಅನೂಪ್ ಭಂಡಾರಿ. ಈಗ ಬಂದಿರುವ ವಿಕ್ರಾತ್ ರೋಣ ಚಿತ್ರ ಅದರದ್ದೇ ಇನ್ನೊಂದು ಆವೃತ್ತಿಯಾ ಅನ್ನಿಸುವಂತಿದೆ. ಅದೇ ಕಮರೊಟ್ಟು, ಅಲ್ಲಿ ಭೂತಾರಾಧನೆಯನ್ನು ನಿಲ್ಲಿಸಿದ ಒಂದು ಫ್ಯಾಮಿಲಿ ಅದಕ್ಕೊಂದು ಕಾರಣ. ಅದರ ಸುತ್ತ ತೆರೆದುಕೊಳ್ಳುವ ಕಥೆ ಹಲವು ಮಜಲುಗಳೊಂದಿಗೆ ಸಾಗುತ್ತದೆ.
ರಂಗಿತರಂಗ ಸಿನಿಮಾದಲ್ಲಿ ಗರ್ಭಿಣಿ ಮಹಿಳೆಯರ ಕೊಲೆಯಾಗುತ್ತಿರುತ್ತದಲ್ಲಾ? ಹಾಗೇ ಇಲ್ಲಿ ಆಡುವ ಮಕ್ಕಳ ಮಾರಣ ಹೋಮ ನಡೆಯುತ್ತಿರುತ್ತದೆ. ಅದರ ಜೊತೆಗೆ ಆ ಊರಿನ ಪೊಲೀಸ್ ಇನ್ಸ್ ಪೆಕ್ಟರ್ ಕೂಡಾ ನಿಗೂಢವಾಗಿ ಹತನಾಗಿರುತ್ತಾನೆ. ಈ ಎಲ್ಲಾ ಕೊಲೆಗಳನ್ನು ಮಾಡುತ್ತಿರುವವರು ಯಾರು? ಅವರ ಉದ್ದೇಶವೇನು? ಅನ್ನೋದನ್ನೆಲ್ಲಾ ಕಂಡು ಹಿಡಿಯಲು ಬರುವ ಪೊಲೀಸ್ ಅಧಿಕಾರಿ ವಿಕ್ರಾಂತ್ ರೋಣ…. ಅಸಲಿಗೆ ಇನ್ಸ್ ಪೆಕ್ಟರ್ ವಿಕ್ರಾಂತ್ ರೋಣನಿಗೂ ಇಲ್ಲಿ ನಡೆಯುವ ಹತ್ಯಾಕಾಂಡಕ್ಕೂ ಏನಾದರೂ ಪರ್ಸನಲ್ಲಾಗಿ ಏನಾದರೂ ಸಂಬಂಧ ಇದೆಯಾ ಅನ್ನೋದೇ ಅಸಲೀ ಕಥೆ!vikranth ronaಚೆಕ್ ಪೋಸ್ಟ್ ನ ಗೇಟ್ ಕೀಪರ್ ಯಾಕೆ ದಿಡೀರಂತ ಸತ್ತು ಬೀಳುತ್ತಾನೆ? ಸ್ಮಗ್ಲರ್ ಮೂಸಾ ಕೊಲೆಯ ಹಿಂದಿನ ರಹಸ್ಯವೇನು? ಕಮರೊಟ್ಟು ಫ್ಯಾಮಿಲಿಗೂ ಈ ಎಲ್ಲ ಕೊಲೆಗೂ ಇರುವ ನಂಟು ಯಾವುದು… ಹೀಗೆ ಅಷ್ಟ ದಿಕ್ಕುಗಳಲ್ಲೂ ಕುತೂಹಲ ಕೆರಳುವಂತೆ ಮಾಡುವ ಚಿತ್ರ ವಿಕ್ರಾಂತ್ ರೋಣ.vikranth rona

ಇಪ್ಪತ್ತೆಂಟು ವರ್ಷಗಳ ಹಿಂದೆ ನಡೆದ ದೇವಸ್ಥಾನದ ಒಡವೆ ಕಳ್ಳತನದ ಸುಳ್ಳು ಆರೋಪ. ಒಂದಿಡೀ ಕುಟುಂಬವನ್ನು ಹೇಗೆ ಅಪೋಶನ ತೆಗೆದುಕೊಳ್ಳುತ್ತದೆ ಮತ್ತು ಅದು ತಲೆಮಾರುಗಳ ಆಚೆಗಿನವರನ್ನೂ ಯಾವೆಲ್ಲಾ ರೀತಿಯಲ್ಲಿ ಬಾಧಿಸುತ್ತದೆ ಅನ್ನೋ ವಿಚಾರ ವಿಕ್ರಾಂತ್ ರೋಣ ಚಿತ್ರದಲ್ಲಿ ಅನಾವರಣಗೊಂಡಿದೆ. ಯಾರೂ ಊಹೆ ಮಾಡಲಾರದ ಕ್ಲೈಮ್ಯಾಕ್ಸ್ ಚಿತ್ರದ ಪ್ಲಸ್ ಪಾಯಿಂಟ್!vikranth rona

ಯಾರೂ ಊಹೆ ಮಾಡದ ಪಾತ್ರವನ್ನು ನಿರೂಪ್ ಭಂಡಾರಿ ಇಲ್ಲಿ ನಿಭಾಯಿಸಿದ್ದಾರೆ. ಸುದೀಪ್ ಅದ್ಭುತ ನಟ ಅನ್ನೋದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಎಂಥಾ ಪಾತ್ರ ಕೊಟ್ಟರೂ ಅದಕ್ಕವರು ನ್ಯಾಯ ಒದಗಿಸುತ್ತಾರೆ. ಇಷ್ಟಾಗಿಯೂ ಕೆಲವೊಂದು ದೃಶ್ಯಗಳಲ್ಲಿ ಸುದೀಪ್ ಡೈಲಾಗ್ ಡೆಲಿವರಿ ಬಿಗ್ ಬಾಸ್ ಶೋ ನಿರೂಪಣೆಯನ್ನು ನೆನಪಿಸುತ್ತದೆ! ಕಲಾ ನಿರ್ದೇಶಕ ಶಿವಕುಮಾರ್ ಕಾರಣಕ್ಕೆ ಇಡಿಯ ವಿಕ್ರಾಂತ್ ರೋಣ ಹೊಸ ಜಗತ್ತಿಗೆ ಕರೆದೊಯ್ಯುವಂತಿದೆ. ಬೆಳಕಿನ ದೃಶ್ಯಗಳು ಕಡಿಮೆ ಇದ್ದು ಬಹುತೇಕ ಕತ್ತಲ ಹಿನ್ನೆಲೆಯಲ್ಲಿಯೇ ಚಿತ್ರ ಸಾಗುತ್ತದೆ. ವಿಲಿಯಮ್ಸ್ ಡೇವಿಡ್ ಕೆಲಸ ಪರವಾಗಿಲ್ಲ. ಕನ್ನಡದ ಮಟ್ಟಿಗೆ ಸಂಪೂರ್ಣ ತ್ರೀಡಿ ಸಿನಿಮಾ ಇದಾಗಿರುವುದು ವಿಕ್ರಾಂತ್ ರೋಣ ಚಿತ್ರದ ಹೆಗ್ಗಳಿಕೆ.l12920220624124929

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…