ಮಗನಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಶಶಿಕುಮಾರ್!

80-90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸುಪ್ರೀಮ್ ಹೀರೋ ಎಂದೇ ಹೆಸರೇ ಮಾಡಿದ್ದ ಶಶಿಕುಮಾರ್ ಅವರ ಮಗ ಅಕ್ಷಿತ್ ಶಶಿಕುಮಾರ್ ಅಭಿನಯದ ‘ಓ ಮೈ ಲವ್’ ಚಿತ್ರವು ಜುಲೈ 15ರಂದು ರಾಜ್ಯಾದ್ಯಂತ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಬಗ್ಗೆ ಅಕ್ಷಿತ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಚಿತ್ರ ದೊಡ್ಡ ಬ್ರೇಕ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.WhatsApp Image 2022 05 25 at 10.00.16 AM

ಈ ಚಿತ್ರ ಪ್ರಾರಂಭವಾಗುವುದಕ್ಕೆ ಮುಂಚೆ ಶಶಿಕುಮಾರ್ ತಮ್ಮ ಮಗನಿಗೆ ಒಂದಿಷ್ಟು ಸಲಹೆಗಳನ್ನು ನೀಡಿದ್ದರಂತೆ. ಚಿತ್ರರಂಗದಲ್ಲಿ ಹೇಗಿರಬೇಕು, ಏನು ಮಾಡಬಾರದು ಎಂಬ ಪಾಠವನ್ನು ಹೇಳಿಕೊಟ್ಟಿದ್ದರಂತೆ. ಅದನ್ನು ಪಾಲಿಸದಿದ್ದರೆ ಚಪ್ಪಲಿಯಲ್ಲಿ ಹೊಡೆಯುವುದಾಗಿ ಹೇಳಿದ್ದರಂತೆ. ಇಷ್ಟಕ್ಕೂ ಶಶಿಕುಮಾರ್, ಅಕ್ಷಿತ್ಗೆ ಹೇಳಿಕೊಟ್ಟ ಪಾಠವೇನು? ಇದನ್ನು ಅಕ್ಷಿತ್ ಮಾತುಗಳಲ್ಲೇ ಕೇಳಬೇಕು.oh my love kannada movie

‘ನಮ್ಮ ಚಿತ್ರದಲ್ಲಿ ಎಸ್. ನಾರಾಯಣ್ ಅವರಂಥ ಹಿರಿಯ ನಟರು ನಟಿಸಿದ್ದಾರೆ. ಅವರನ್ನು ನಾನು ತೆರೆಯ ಮೇಲೆ ನೋಡಿದ್ದೆ. ಅವರ ಜತೆಗೆ ಕೆಲಸ ಮಾಡಬೇಕು ಎಂದಾಗ ಕಾಲು ನಡಗುತ್ತಿತ್ತು. ಅವರಿಗೆ ನಮಸ್ಕರಿಸುವುದಕ್ಕೆ ಹೋದಾಗ, ಎಡವಿ ಬಿದ್ದೆ. ಯಾಕೋ ಮಗನೆ, ‘ನನ್ನನ್ನು ನೋಡಿ ಅಷ್ಟು ಭಯವಾಗುತ್ತಿದೆಯಾ?’ ಎಂದು ಕೇಳಿದರು ಅವರು. ಅವರು ಅಷ್ಟು ಜೋವಿಯಲ್ ಅಂತ ಗೊತ್ತಿರಲಿಲ್ಲ. ಎಸ್. ನಾರಾಯಣ್ರಂತಹ ಹಿರಿಯ ನಟರು ನಟನೆ ಮಾಡುವಾಗ ಕ್ಯಾರಾವಾನ್ನಲ್ಲಿ ಕೂತಿದ್ದು ಗೊತ್ತಾದರೆ ಬಂದು ಚಪ್ಪಲಿಯಲ್ಲಿ ಹೊಡೆಯುತ್ತೀನಿ ಎಂದು ನಮ್ಮ ತಂದೆ ಹೇಳಿದ್ದರು. ಹಾಗಾಗಿ, ಅವರು ನಟನೆ ಮಾಡುವಾಗ ಮಾನಿಟರ್ ಮುಂದೆ ಕೂತಿರುತ್ತಿದ್ದೆ. ಅವರು ನಟ, ನಿರ್ದೇಶಕ. ಬಹಳ ಸೀನಿಯರ್. ಅವರಿಂದ ಕಲಿಯುವುದು ಬಹಳ ಇದೆ’ ಎನ್ನುತ್ತಾರೆ ಅಕ್ಷಿತ್.WhatsApp Image 2022 06 14 at 10.01.29 AM 2

ಇನ್ನು, ಈ ಕುರಿತು ಮಾತನಾಡುವ ಶಶಿಕುಮಾರ್, ‘ನಾನು ಕಳೆದ ವರ್ಷ ಈ ಚಿತ್ರದ ಮುಹೂರ್ತಕ್ಕೆ ಹೋಗಿದ್ದು ಬಿಟ್ಟರೆ, ಒಂದೇ ಒಂದು ದಿನ ಶೂಟಿಂಗ್ಗೆ ಹೋಗಿರಲಿಲ್ಲ. ಒಂದೇ ಒಂದು ಶಾಟ್ ಸಹ ನಾನು ನೋಡಿಲ್ಲ. ತುಂಬಾ ಕರೆಯುತ್ತಿದ್ದರು. ನಾನು ಹೋಗಲಿಲ್ಲ. ಆದರೆ, ಮಗನಿಗೆ ಒಂದಿಷ್ಟು ವಿಷಯಗಳನ್ನು ಹೇಳಿದ್ದೆ. ಪ್ರಮುಖವಾಗಿ, ನಿರ್ದೇಶಕರ ಮಾತು ಕೇಳು. ಹಿರಿಯರನ್ನು ಅಬ್ಸರ್ವ್ ಮಾಡು. ಶಾಟ್ ಮುಗಿಸಿ ಸುಮ್ಮನೆ ಕೂರುವುದಲ್ಲ. ಅವರೇನು ಮಾಡುತ್ತಾರೆ ಎಂಬುದನ್ನು ನೋಡುತ್ತಿರು. ಅವರನ್ನು ನೋಡಿ ಕಲಿತುಕೋ ಎಂದು ಹೇಳಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಶಶಿಕುಮಾರ್.WhatsApp Image 2022 06 14 at 10.01.30 AM

ಅದಕ್ಕೆ ಕಾರಣವನ್ನೂ ಅವರೇ ನೀಡುತ್ತಾರೆ. ‘ಕಲಿಕೆ ಎನ್ನುವುದು ಯಾವತ್ತೂ ಮುಗಿಯುವುದಿಲ್ಲ. ಸಾಯುವವರೆಗೂ ನಾವು ಕಲಿಯುತ್ತಲೇ ಇರಬೇಕು. ಅದು ಸಾಗರದಂತೆ. ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳ ಮೇಲಾಯಿತು. ಇನ್ನೂ ಕಲಿಯುವುದು ತುಂಬಾ ಇದೆ. ಏಳು-ಬೀಳು ಇದ್ದೇ ಇರುತ್ತದೆ. ನನಗೆ ಕೊಟ್ಟ ಸಹಕಾರ-ಪ್ರೋತ್ಸಾಹಗಳನ್ನು ನನ್ನ ಮಗನಿಗೂ ಕೊಡಿ’ ಎನ್ನುತ್ತಾರೆ ಶಶಿಕುಮಾರ್.oh my love kannada movie

‘ಓ ಮೈ ಲವ್’ ಚಿತ್ರವನ್ನು ಜಿಸಿಬಿ ಕ್ರಿಯೇಷನ್ಸ್ನಡಿ ರಾಮಾಂಜನಿ ಎನ್ನುವವರು ಕಥೆ ಬರೆದು ನಿರ್ಮಿಸಿದ್ದಾರೆ. ಸ್ಮೈಲ್ ಶ್ರೀನು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಕ್ಷಿತ್, ಕೀರ್ತಿ, ಎಸ್. ನಾರಾಯಣ್, ಸಾಧು ಕೋಕಿಲ, ಪವಿತ್ರಾ ಲೋಕೇಶ್ ಮುಂತಾದವರು ನಟಿಸಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…