ಹೊರಗೆ ಕಾಣುವಷ್ಟೇ ಅಲ್ಲ, ಮಮತಾ ರಾಹುತ್
ವಿಷಯ ಬೇರೇನೇ ಇದೆ.

mamatha rahuth kannada actress

ಯಾರನ್ನೂ ಹೊರಗಿನಿಂದ ನೀನು ಅಳೆಯಲಾರೇ.. ಯಾರ ಒಳಗೂ ನೀ ಇಳಿದು ನೋಡಲಾರೆ,, ನಿನಗೆ ದಕ್ಕಿದ್ದು ಅಷ್ಟೇ, ಅದು ಪೂರ್ಣವಲ್ಲ ಈ ಸಾಲುಗಳಿಗೆ ಈ ಸಂದರ್ಭ ಸೂಕ್ತವಾಗಿದೆ.mamatha rahuth kannada actress

ರಾಯನ್ ಸರ್ಕಲ್ಲಿನಲ್ಲಿ ಇದ್ದ ಆಸ್ಪತ್ರೆಯೊಂದರಲ್ಲಿ ಚಿತ್ರೀಕರಣದ ನಿಮಿತ್ತ ಸೇರಿದ್ದೆವು. ಮಟ ಮಟ ಮಧ್ಯಾಹ್ನದ ಉರಿ ಬಿಸಿಲು ಹೊರಗೆ ಇತ್ತೇನೋ ನನಗೆ ಗೊತ್ತಿಲ್ಲ, ನಾನು ತಂಪಾಗಿ ವಾರ್ಡ ಒಂದರಲ್ಲಿ ಇದ್ದೆ.

ಅದೇ ಬಿಸಿಲಿನಲ್ಲಿ ಬಂದಿರಬೇಕು, ಬಿರುಸಾಗಿ ಬಂದವರೇ ಹಾಯ್ ಎನ್ನುತ್ತ ಒಳಗೆ ಬಂದದ್ದು ಮಮತಾ ರಾಹುತ್. ಅದು ನಮ್ಮಿಬ್ಬರ ಮೊದಲ ಭೇಟಿ, ಮುಖಾ ಮುಖಿಯಾಗಿ. ಆದರೆ ಜಂಗಮ ವಾಣಿಯಲ್ಲಿ ಈ ಮೊದಲೇ ಪರಿಚಿತರು, ಆದರೂ ನನ್ನ ಬಗ್ಗೆ ಅವರಿಗಾಗಲಿ, ಅವರ ಬಗ್ಗೆ ನನಗಾಗಲಿ ಹೆಚ್ಚು ಗೊತ್ತಿರಲಿಲ್ಲ.mamatha rahuth kannada actress

ಒಂದಷ್ಟು ಕೆಲಸ ಆಗಲೇ ಮುಗಿದಿತ್ತು. ಅಂದಿನ ದಿನದ ಚಿತ್ರೀಕರಣದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಲು ಇವರು ರೆಡಿಯಾಗಿ ಬಂದರು. ಅಲ್ಲೊಂದು ಸಣ್ಣ ಪರಿವರ್ತನೆಯ ಬಗ್ಗೆ ನಾನು ಅವರಿಗೆ ಸೂಕ್ಷ್ಮ ವಾಗಿಯೇ ಹೇಳಿದೆ. ಅದು ಅವರಿಗೆ ಇರಿಸು ಮುರುಸೂ ಆಗಿತೇನೊ, ಶಿವು ನಿಮಗೆ ಹೇಗೆ ಬೇಕು ಹೇಳಿ ನಿಮಗೆ ಬೇಕಾದ ವೇರೈಟಿಯಲ್ಲಿ ಕೊಡುತ್ತೇನೆ ಎಂದರು.mamatha rahuth kannada actress bramha kamala

ನಾನು ನಿರ್ದೇಶಕನಾದಾರು ಅಂದು DOP ಕುರ್ಚಿಯಲ್ಲಿ ಕುಳಿತಿದ್ದೆ, ಅದಕ್ಕೆ ಕಾರಣ ನಾನು ಆ ಸಿನಿಮಾದಲ್ಲಿ ವಹಿಸಿದ್ದ ಸ್ಥಾನ ಅದೇ ಆಗಿತ್ತು. ಆದ ಕಾರಣ ನಾನು ಕುಳಿತಿದ್ದ ಕುರ್ಚಿಯನ್ನು ಸರಿ ಪಡಿಸಿಕೊಂಡು ಕುಳಿತೆ. ಆ ದಿನದ ಕೆಲಸ ಬೆಳಗ್ಗೆ ನಾಲ್ಕು ಗಂಟೆಯ ವರೆಗೂ ಮುಂದುವರೆಯಿತು, ಅಂದು ಅವರ ಅಭಿನಯ ನೋಡಿದೆನಾದರು, ಪರಸ್ಪರ ಮಾತನಾಡಲು ಯಾರಿಗೂ ಸಮಯವಿರಲಿಲ್ಲ.mamatha rahuth kannada actress

ಆ ನಂತರ ಮತ್ತೊಂದು ದಿನ ಚರ್ಚ್ ಒಂದರಲ್ಲಿ ಚಿತ್ರೀಕರಣ ನಡೆದಿತ್ತು, ಅಲ್ಲಿಗೆ ಮತ್ತೊಬ್ಬರು ಹಿರಿಯ ಕಾಲಾವಿದರು ಬಂದಿದ್ದರು. ಅವರ ಬಗ್ಗೆ ಮುಂದೆ ಹೇಳುತ್ತೇನೆ. ಆ ದಿವಸ ಹೆಚ್ಚಿನ ಕೆಲಸ ಇರದ ಕಾರಣ ಮಂದಗತಿಯಲ್ಲಿ ಕೆಲಸ ನಡೆದಿತ್ತು. ಕುಳಿತು ಹಾಗೇ ಮಾತಾಡುವಾಗ ಪರಸ್ಪರ ಪರಿಚಯಕ್ಕೆ ಇಳಿದೆವು. ಊರು ಕೇರಿ ಈ ಹಿಂದೆ ನಡೆದ ಸಿನಿಮಾಗಳ ಬಗ್ಗೆ, ಮಾತ ಮುಂದುವರೆದವು.

ನಾನು ಮೊದಲಿಗೆ ಅಂದುಕೊಂಡದ್ದು ಆಕಿ ಹೊಸಬರು ಇರಬೇಕು ಎಂದು. ಆದರೆ ಅವರು ಬಾಲ ನಟಿಯಾಗಿ ಗಾಂಧಿನಗರವನ್ನು ನೋಡ ಬಂದವರು ಎಂಬುದು ಆಗಷ್ಟೇ ತಿಳಿಯಿತು. ಹತ್ತಾರು ವರ್ಷಗಳ ಸಿನಿಮಾ ಜರ್ನಿ ಮುಗಿಸಿದ್ದ ಅನುಭವ ಹೇಳಿದರು. ಅದರಲ್ಲಿ ನನಗೊಂದು ವಿಶೇಷತೆ ಅನಿಸಿತು.mamatha rahuth kannada actress

PRO ನಾಗೇ0ದ್ರ ಅವರ ಪರಿಚಯ ಎಲ್ಲರಿಗೂ ಇದೆ ಎಂದು ಭಾವಿಸುತ್ತೇನೆ, ಅವರು ಇಂಡಸ್ಟ್ರಿಯ ಹಳೇ ತಲೆ. ಅಳಬರಿಂದ ಹೊಸಬರ ವರೆಗೂ ಎಲ್ಲರ ಸಂಪರ್ಕಕ್ಕೆ ಸಿಕ್ಕುವಂತಹ ವ್ಯಕ್ತಿ . ಅವರು ಮಮತಾ ಅವರಿಗೆ ಒಂದು ಸಿನಿಮಾ ಪತ್ರಿಕಾ ಕೂಟದಲ್ಲಿ ಸಿಕ್ಕಾಗ ಒಂದು ಮಾತು ಅಂದರಂತೆ, ಮಮತಾ.. ನಾನು ಎಲ್ಲಾ ಕಲಾವಿದರ ಬಾಯಿಯಲ್ಲಿಯೂ ಈ ಪದ ಸಹಜವಾಗಿ ಕೇಳುತ್ತೇನೆ, ವಿಭಿನ್ನ, ಡಿಫರೆಂಟ್ ಎಂದು ಆದರೆ ಯಾವ ನಾಯಕಿಯರಲ್ಲಿಯೂ ಹಾಗೆ ವಿಶೇಷ ಅಂತ ನನಗೇನೂ ಅನಿಸುತ್ತಿಲ್ಲ, ಎಲ್ಲರೂ ಅದೇ ಗ್ಲಾಮರ್ , ಅದೇ ಬಬ್ಲಿ ಅನ್ನೋ ಹಾಗೆ. ಆ ಪದ ಕೇಳಿ ಕೇಳಿ ಸಾಕಾಗಿದೆ ಅಂದರಂತೆ, ಆ ಮಾತು ಇವರಲ್ಲಿ ಪರಿಣಾಮವಾಗಿ ಹೊಸದೊಂದು ಬದಲಾವಣೆಗೆ ಮುಂದಾದರಂತೆ.mamatha rahuth kannada actress

ಅವರು ಗಾಂಧಿನಗರದಲ್ಲಿ ವಿಭಿನ್ನ ಅನ್ನೋ ಹೆಸರಿನಲ್ಲೇ ಗುರುತಿಸಿಕೊಳ್ಳುವ ಉದ್ದೇಶದಿಂದ ” ದೇಹ ದಂಡನೆಗೆ ಮುಂದಾಗಿ ಸಿಕ್ಸ್ ಪ್ಯಾಕ್ ಮಾಡುವ ಮೂಲಕ ಹ್ಯಾಕ್ಷನ್ ನಟಿ ಆಗುವ ಉದ್ದೇಶವಾಗಿದೆ, ಅಂದುಕೊಂಡ ಸಿಕ್ಸ್ ಪ್ಯಾಕ್ ಕೂಡ ಮಾಡಿ ತಮ್ಮನ್ನು ತಮಗೆ ಬೇಕಾದ ಹಾಗೆ ರೂಪಿಸಿ ಕೊಂಡರಂತೆ. ಬಹುಷ್ಹ ಈ ದೇಹ ದಂಡನೆಯ ವಿಷಯವಾಗಿ ಅಂದುಕೊಂಡ ಹಾಗೆ ತಮ್ಮನ್ನು ರೂಪಿಸಿಕೊಳ್ಳಲು ಎಲ್ಲರಿಂದಲೂ ಸಾದ್ಯವಿಲ್ಲ, ಅದರಲ್ಲೂ ಹೆಣ್ಣು ಮಕ್ಕಳಿಗೆ ಅದು ವಿಪರೀತ ಕಷ್ಟ.

ಆದರೆ ಮಮತಾ ಅವರು ಆ ವಿಷಯವಾಗಿ ಸಾಧಕರೆ ಹೌದು. ಆದರೆ ಅವರ ಆ ಪರಿಶ್ರಮಕ್ಕೆ ಸರಿಯಾದ ಸಿನಿಮಾ ಸಿಗಲಿಲ್ಲ ಎನ್ನುವ ಬೇಸರ ಅವರದು. ಅದು ಯಾರೇ ಆದರೂ ಸಹಜವೇ ಅಲ್ವಾ. ಅವರು ಮಾಡದ ಪಾತ್ರಗಳೇ ಇಲ್ಲ. ಕಾಮಿಡಿ ಟ್ರಾಜಿಡಿ, ಎಲ್ಲವೂ ಆಗಿದೆ.
ಸಣ್ಣ ವಯಸ್ಸಿನಲ್ಲೇ ಬಣ್ಣ ಹಚ್ಚಿದವರು ಮಮತಾ ರಾಹುತ್. ಆದರೆ ಅವರಿಗೆ ಇನ್ನೂ ಅವರ ಪ್ರತಿಭೆಗೆ ತಕ್ಕ ಪಾತ್ರ ಸಿಕ್ಕಿಲ್ಲವೆಂಬ ಬೇಸರ ಅವರದು. ಅದಕ್ಕೆ ಪರಿಹಾರವಾಗಿ ಮುಂದಿನ ದಿನಗಳಲ್ಲಿ ಅವರದೇ ಪ್ರೊಡಕ್ಷನ್ ಹೌಸ್ ನಲ್ಲಿ ಅಂತಹ ಸಿನಿಮಾ ನಿರ್ಮಿಸುವ ಉದ್ದೇಶವನ್ನು ಹೊಂದಿದ್ದಾರೆ.mamatha rahuth kannada actress

ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಎನ್ನುವ ಹಾಗೆ ಯಾರಲ್ಲಿ ಯಾವ ರೀತಿಯ ಪ್ರತಿಭೆ ಇದೆಯೋ ಎನ್ನುವುದು ಅದಕ್ಕೆ ಪೂರಕವಾದ ಅವಕಾಶ ಸಿಕ್ಕಾಗ ಮಾತ್ರವೇ ಅದು ಜಗತ್ತಿನ ಕಣ್ಣಿಗೆ ಬೀಳುತ್ತದೆ. ಅಲ್ಲಿಯವರೆಗೂ ಪಯಣ ಮುಂದುವರೆಯಲೇ ಬೇಕು.

ಅಂತೂ ಬ್ರಹ್ಮಕಮಲ ಚಿತ್ರ ತಂಡಕ್ಕೆ ನಿರ್ದೇಶಕ ಸಿದ್ದು ಪೂರ್ಣ ಚಂದ್ರ ಅವರ ಕಲ್ಪನೆಯ ಪಾತ್ರಕ್ಕೆ ಜೊತೆಯಾದರು ಮಮತಾ ರಾಹುತ್ ಅವರ ಕನಸಿನ ಸಿನಿಮಾ ಆದಷ್ಟು ಬೇಗ ಕೈಗೊಳ್ಳಲಿ ಎಂದು ಬಯಸುತ್ತೇನೆ.

-ಲೋಕೇಂದ್ರ ಸೂರ್ಯ.mamatha rahuth kannada actress

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…