ಕಾಣೆಯಾದವರ ಬ್ಯಾಂಕಾಕ್ ಪ್ರವಾಸ!

ಇಲ್ಲಿನವರ ಪಾಲಿಗೆ ಅವರು ಕಾಣೆಯಾದವರು. ಪೊಲೀಸರು ಎಲ್ಲ ಕಡೆ ʻಪ್ರಕಟಣೆʼಯನ್ನೂ ಹೊರಡಿಸಿರುತ್ತಾರೆ. ಆದರೆ ಅಲ್ಲಿ ಆ ಮೂವರೂ ವಿಲಾಸೀ ಬದುಕನ್ನು ಅನುಭವಿಸುತ್ತಿರುತ್ತಾರೆ. ಹೇಳಿ ಕೇಳಿ ಅದು ಬ್ಯಾಂಕಾಕ್. ಸುತ್ತ ಹುಡುಗೀರು, ಎಣ್ಣೆ ಏಟಲ್ಲಿ ಮೈಮರೆತಿರುತ್ತಾರೆ. ಹಾಗೆ ತಮ್ಮನ್ನು ತಾವು ಕಳೆದುಕೊಂಡು ದಾರಿ ಗೊತ್ತಿರದ ಊರಲ್ಲಿ ಮನಸೋ ಇಚ್ಛೆ ಮಾಡಲು ಹೋದವರು ಅರವತ್ತು ಪ್ಲಸ್ ವಯಸ್ಸಿನವರು ಅನ್ನೋದು ನಿಜಕ್ಕೂ ವಿಶೇಷ! ಧಡಕ್ಕಂತಾ ಫ್ಲಾಷ್ ಬ್ಯಾಕ್ ಓಪನ್ ಆಗುತ್ತದೆ. ಮೂವರೂ ದೋಸ್ತಿಗಳ ವಾಲ್ಯ, ಪ್ರೌಢ ಮತ್ತು ಯೌವನದ ದಿನಗಳು ಹಂತಹಂತವಾಗಿ ತೆರೆದುಕೊಳ್ಳುತ್ತದೆ. ವಾಸ್ತವ ಮತ್ತು ನೆನಪುಗಳು ಹಿಂದಕ್ಕೂ ಮುಂದಕ್ಕೂ ಚಲಿಸುತ್ತಿರುತ್ತವೆ.pic 1

ಅಸಲಿಗೆ ಈ ಮೂವರು ಯಾರು? ಮಧ್ಯದಲ್ಲಿ ಹೇಗೆ ಬೇರೆಯಾಗಿದ್ದರು? ಮತ್ತೆ ಒಂದು ಸೇರಿದ್ದು ಎಲ್ಲಿ? ಯಾಕೆ? ಈಗ ಮೂವರೂ ಹೆಚ್ಚೂಕಮ್ಮಿ ತಲೆ ತಪ್ಪಿಸಿಕೊಂಡು ಮಲೇಶಿಯಾ, ಥಾಯ್ ದೇಶಗಳಿಗೆ ಬಂದದ್ದರ ಕಾರಣ ಏನು? ಅನ್ನೋದೆಲ್ಲಾ ಮಜಮಜವಾಗಿ ಗೊತ್ತಾಗುತ್ತದೆ. ದೊಡ್ಡದೊಂದು ಆತಂಕವೂ ಎದುರಾಗುತ್ತದೆ. ಇಲ್ಲೆಲ್ಲೋ ನಡೆದ ಕೊಲೆಗೂ ವೃದ್ಧರಿಗೂ ಏನು ಸಂಬಂಧ ಅನ್ನೋದರ ಹಿನ್ನೆಲೆ ರೋಚಕವಾಗಿ ಅನಾವರಣಗೊಂಡಿದೆ!kn bng 05 kaneyadavara bagge prakatane cinemadahli asika 7204736 30012021203334 3001f 1612019014 213

ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾವನ್ನು ನೋಡುವಾಗ ಇದು ನಿಖರವಾಗಿ ಇದೇ ದಿಕ್ಕಿಗೆ ಸಾಗುತ್ತದೆ ಅಂತಾ ಹೇಳಿಕ್ಕಾಗುವುದಿಲ್ಲ. ರಂಗಾಯಣ ರಘು, ರವಿಶಂಕರ್ ಮತ್ತು ತಬಲಾ ನಾಣಿ – ಮೂವರೂ ಗೊತ್ತೂ ಗುರಿ ಇಲ್ಲದ ದೇಶದಲ್ಲಿ ಬಿಂದಾಸಾಗಿ ಎಂಜಾಯ್ ಮಾಡಲು ಹೋಗಿರುತ್ತಾರೆ. ಅಲ್ಲಿ ಗೈಡ್ ಚಿಕ್ಕಣ್ಣ ಕೂಡಾ ಜೊತೆಯಾಗುತ್ತಾನೆ. ನಡುವೆ ಹೀರೋಯಿನ್ ಆಶಿಕಾ ಕೂಡಾ ಬಂದು ಹೋಗುತ್ತಾಳೆ.
ರವಿಶಂಕರ್, ರಂಗಾಯಣ ರಘುವಿಗೆ ಹೋಲಿಸಿದರೆ ತಬಲಾ ನಾಣಿಗೆ ಯಥಾಪ್ರಕಾರ ಕುಡುಕನ ಪಾತ್ರವೇ ಇಲ್ಲೂ ಸಿಕ್ಕಿದೆ. ಫ್ಲಾಷ್ ಬ್ಯಾಕ್ ನಲ್ಲಿ ಬಂದುಹೋಗಿರುವ ನಿರ್ದೇಶಕ ಅನಿಲ್ ಕುಮಾರ್ ಪಾತ್ರ ಗಮನ ಸೆಳೆಯುತ್ತದೆ. ಜೊತೆಗೆ ತಮಿಳಿನ ವಡಾ ಚೆನ್ನೈನ ರಾಜನ್ ಪಾತ್ರವನ್ನು ನೆನಪಿಗೆ ತರುತ್ತದೆ. ಪೊಲೀಸ್ ಪಾತ್ರದಲ್ಲಿ ತಿಲಕ್ ಅಬ್ಬರವಿಲ್ಲದೆ ನಟಿಸಿ ಇಷ್ಟವಾಗುತ್ತಾರೆ.768 512 10441220 317 10441220 1612020118526

ಭೂತ, ಭವಿಷ್ಯ ಮತ್ತು ವರ್ತಮಾನಗಳ ವಿಚಾರಗಳನ್ನು ಒಂದೇ ಹಿಡಿಯಲ್ಲಿ ಕಟ್ಟಿಕೊಟ್ಟಿರುವ ಈ ಚಿತ್ರ ಮೇಲ್ನೋಟಕ್ಕೆ ಹಾಸ್ಯ ಲೇಪಿತವಾಗಿದೆ. ಹಣವೊಂದನ್ನು ಆನ್ ಲೈನಲ್ಲಿ ಕಳಿಸಿಬಿಟ್ಟರೆ, ಅರಮನೆಯಂತಾ ಮನೆಯಲ್ಲಿ ಹೆತ್ತವರು ನೆಮ್ಮದಿಯಾಗಿರುತ್ತಾರೆ ಅಂದುಕೊಂಡಿರುವ ಎನ್ನಾರೈ ಮಕ್ಕಳು, ಗಂಡು ಮಗುವೇ ಬೇಕು ಅಂತಾ ಜೀವಮಾನವಿಡೀ ಹೆಣ್ಣುಮಕ್ಕಳನ್ನು ನಿಂದಿಸುವ ಅಪ್ಪಂದಿರು, ತಮ್ಮಿಡೀ ಜೀವ, ಜೀವನವನ್ನು ಮುಡಿಪಾಗಿಟ್ಟು ಸಾಕಿದವರು ಅಂತಲೂ ನೋಡದೆ ಪೋಷಕರನ್ನು ಬೀದಿಗೆ ಬಿಡುವ, ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳು, ಆಸ್ತಿಗಾಗಿ ಜೀವ ನೀಡಿದವರನ್ನೇ ಸುಪಾರಿ ಕೊಟ್ಟು ಕೊಲ್ಲಿಸುವ ನೀಚ ಮಕ್ಕಳು… ಹೀಗೆ ಹಲವು ಸತ್ಯಗಳನ್ನು, ಗಂಭೀರ ವಿಚಾರಗಳನ್ನೂ ತಣ್ಣಗೆ ಹೇಳಿದ್ದಾರೆ.Ashika 01

ಈ ಕಾರಣಕ್ಕಾದರೂ ಒಮ್ಮೆ ʻಕಾಣೆಯಾದವರ ಬಗ್ಗೆ ಪ್ರಕಟಣೆʼಯನ್ನು ನೋಡಿ ಬನ್ನಿ!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…