ಯಶಸ್ಸಿನ ಖುಷಿಯಲ್ಲಿ ಡಿ.ಆರ್. 56

In the joy of success, D.R. 56

ಇದು ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ!

 In the joy of success, D.R. 56

ತೀರಾ ಹೊಸದೆನ್ನುವ ಸಬ್ಜೆಕ್ಟನ್ನು ಆಯ್ಕೆ ಮಾಡಿಕೊಂಡು, ಅದರ ಸುತ್ತ ಸಾಕಷ್ಟು ಅಧ್ಯಯನವನ್ನೂ ನಡೆಸಿ, ಅದನ್ನೆಲ್ಲಾ ಕತೆಯೊಳಗೆ ಸೇರಿಸಿ ಸಿನಿಮಾ ರೂಪಿಸುವುದು ಕಷ್ಟದ ಕೆಲಸ. ಅದನ್ನು ಯಶಸ್ವಿಯಾಗಿ ಪೂರೈಸಿರುವ ಚಿತ್ರ ʻಡಿ.ಆರ್. 56ʼ. ಕಳೆದ ವಾರ ತೆರೆಗೆ ಬಂದ ʻಡಿ.ಆರ್. 56ʼ. ಎಲ್ಲರ ಮೆಚ್ಚುಗೆ ಗಳಿಸಿದೆ. ಮಾಧ್ಯಮಗಳಿಂದ ಅತ್ಯುತ್ತಮ ವಿಮರ್ಶೆ ಸಿಕ್ಕಿದೆ. ಈ ಗೆಲುವನ್ನು ಹಂಚಿಕೊಳ್ಳಲು ʻಡಿ.ಆರ್. 56ʼ ತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. In the joy of success, D.R. 56

ʻʻಮೈಸೂರು ರಂಗಭೂಮಿಯಲ್ಲಿ ನನ್ನ ಸ್ನೇಹಿತರೊಬ್ಬರಿದ್ದರು. ಅವರು ಗಾರೆ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ನಾಟಕ ಕಲಿಯಲು ಬರುತ್ತಿದ್ದರು. ಅದೊಂದು ದಿನ ನಾವು ಡ್ರಾಮಾ ಪ್ರಾಕ್ಟೀಸ್ ಮಾಡಬೇಕಾದರೆ ಅವರಿಗೆ ವಿಪರೀತ ಜ್ವರ ಬಂತು. ಯಾಕೆ ಅಂತಾ ವಿಚಾರಿಸಿದಾಗ, ಒಂದು ದಿನದ ಮುಂಚೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಂದು ಟ್ಯಾಬ್ಲೆಟ್ ನುಂಗಿಸಿ, ಎರಡು ಗಂಟೆಯ ನಂತರ ಅವರ ರಕ್ತದ ಮಾದರಿ ತೆಗೆದುಕೊಂಡು ಕಳಿಸಿದ್ದರು. ನಂತರ ಅವರಿಗೆ ಸಮಸ್ಯೆ ಶುರುವಾಯಿತು’’ ಈ ವಿಚಾರ ನನ್ನ ತಲೆಯಲ್ಲಿ ಕೊರೆಯುತ್ತಲೇ ಇತ್ತು. ಯಾವಾಗ ನಾವೊಂದು ಸಿನಿಮಾ ಮಾಡಬೇಕು ಅಂತಾ ತೀರ್ಮಾನಿಸಿದೆವೋ? ಆಗ ಈದೇ ವಿಚಾರವಾಗಿ ಒಂದೂವರೆ ವರ್ಷ ರಿಸರ್ಚ್ ಮಾಡಿದೆವು. ಸಾಕಷ್ಟು ಕಂಟೆಂಟ್ ಸಿಕ್ಕಿತು. ಆ ನೈಜ ಘಟನೆಗಳನ್ನು ಆಧರಿಸಿ ರೂಪಿಸಿದ ಚಿತ್ರ ʻಡಿ.ಆರ್. 56ʼ. ನೋಡಿದವರೆಲ್ಲಾ ನಮ್ಮ ಚಿತ್ರವನ್ನು ಇಷ್ಟ ಪಟ್ಟಿದ್ದಾರೆ. ಆದರೆ ಮಳೆ ನಮಗೆ ಅಡ್ಡಿ ಮಾಡಿದೆʼʼ ಎಂದು ಚಿತ್ರಕ್ಕೆ ಕತೆ ಬರೆಯುವುದರ ಜೊತೆಗೆ ನಾಯಕನಟನಾಗಿಯೂ ಕಾಣಿಸಿಕೊಂಡಿರುವ ಪ್ರವೀಣ್ ರೆಡ್ಡಿ (ಪಿ.ಆರ್) ಹೇಳಿಕೊಂಡರು. In the joy of success, D.R. 56

ʻʻಇದು ಮಲ್ಟಿಪ್ಲೆಕ್ಸ್ ಆಡಿಯೆನ್ಸ್ಗೆ ಮಾತ್ರ ತಲುಪುವ ಚಿತ್ರ ಅಂತಾ ನಾವು ಆರಂಭದಲ್ಲಿ ಭಾವಿಸಿದ್ದೆವು. ಆದರೆ ನಮ್ಮ ಅನಿಸಿಕೆ ಸುಳ್ಳಾಯ್ತು. ನಾವು ಐದು ಸಿಂಗಲ್ ಸ್ಕ್ರೀನ್ ಗಳಲ್ಲಿ ಮಾತ್ರ ಚಿತ್ರ ಬಿಡುಗಡೆ ಮಾಡಬೇಕು ಅಂತಾ ಅಂದುಕೊಂಡಿದ್ವಿ. ಟ್ರೇಲರ್ ಸದ್ದು ಮಾಡಿದ ನಂತರ ಸ್ವತಃ ಚಿತ್ರಮಂದಿರದ ಮಾಲೀಕರು ನಮಗೆ ಸಿನಿಮಾ ಕೊಡಿ ಅಂತಾ ಕೇಳಲು ಶುರು ಮಾಡಿದರು. ಕಡೆಗೆ ಅರವತ್ತು ಸಿಂಗಲ್ ಸ್ಕ್ರೀನ್ಗಳಲ್ಲಿ ಮತ್ತು ನಲವತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ʻಡಿ.ಆರ್. 56ʼ. ಚಿತ್ರ ತೆರೆಕಾಣುವಂತಾಯಿತು. ಮಳೆಯಿಂದ ಹೆಚ್ಚು ಜನ ಬರಲು ಸಾಧ್ಯವಾಗುತ್ತಿಲ್ಲ. ಯಾವ ಸಿನಿಮಾಗೂ ಜನ ಥೇಟರಿಗೆ ಬರುತ್ತಿಲ್ಲ. ಇದರ ನಡುವೆಯೂ ಎರಡನೇ ವಾರ ನಮ್ಮ ಚಿತ್ರಕ್ಕೆ ಥೇಟರ್ ಗಳು ಹೆಚ್ಚಾಗಿವೆ.ʼʼ ಎಂದು ಚಿತ್ರವನ್ನು ವಿತರಿಸಿರುವ ವೆಂಕಟ್ ಗೌಡ ಹೇಳಿದರು. In the joy of success, D.R. 56

ಚಿತ್ರದ ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಕಶ್ಯಪ್ ಮಾತಾಡಿ, ʻʻಡಿ.ಆರ್. 56ʼ ಬಿಡುಗಡೆಯ ನಂತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಿಲೀಸಾಗುವ ಮುಂಚೆ ನಮ್ಮ ಚಿತ್ರದ ಹಿಂದಿ, ತಮಿಳು, ತೆಲುಗು ರೈಟ್ಸ್ ಮಾರಾಟವಾಗಿದೆ. ಅದೂ ಹೊಸಬರ ಸಿನಿಮಾ ತೊಂಭತ್ತು ಲಕ್ಷದಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು ನಿಜಕ್ಕೂ ದಾಖಲೆ. ಇನ್ನೂ ಟಿವಿ ಮತ್ತು ಓಟಿಟಿ ಮಾರಾಟವಾಗಬೇಕಿದೆ. ಇದೆಲ್ಲ ಆಗಿ ಇನ್ನೆರಡು ವಾರ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನವಾದರೆ ಹಾಕಿದ ಬಂಡವಾಳದ ಮೇಲೆ ಲಾಭ ನೋಡುವಂತಾಗುತ್ತದೆʼʼ ಎಂದರು. In the joy of success, D.R. 56

ʻಡಿ.ಆರ್. 56ʼ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ. ಸಾಮಾನ್ಯವಾಗಿ ಒಂದು ಭಾಷೆಯಲ್ಲಿ ಶೂಟ್ ಮಾಡಿ ಮಿಕ್ಕ ಭಾಷೆಗಳಿಗೆ ಡಬ್ ಮಾಡುತ್ತಾರೆ. ನಾವು ಪ್ರತ್ಯೇಕವಾಗಿ ಎಲ್ಲ ಭಾಷೆಗಳಲ್ಲೂ ಚಿತ್ರೀಕರಿಸಿದ್ದೇವೆ. ಹೀಗಾಗಿ ಇದು ಡಬ್ಬಿಂಗ್ ಸಿನಿಮಾ ಅಲ್ಲ, ಒರಿಜಿನಲ್ ಪ್ಯಾನ್ ಇಂಡಿಯಾ ಚಿತ್ರ ಎಂದು ನಟ ಯತಿರಾಜ್ ಅಭಿಪ್ರಾಯ ಪಟ್ಟರು. ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿ, ಎಲ್ಲ ವಿಮರ್ಶಕರ ಮೆಚ್ಚುಗೆ ಗಳಿಸಿ, ಸಿನಿಮಾದ ಗೆಲುವಿಗೆ ಕಾರಣರಾಗಿರುವ ರಾಕೇಶ್ ಸಿ ತಿಲಕ್ ಕೂಡಾ ತಮ್ಮ ಖುಷಿ ಹಂಚಿಕೊಂಡರು. In the joy of success, D.R. 56

ಚಿತ್ರದಲ್ಲಿ ಸಿಬಿಐ ಅಧಿಕಾರಿಣಿಯಾಗಿರುವ ಪ್ರಿಯಾಮಣಿ ಮನಾಲಿಯಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವುರಿಂದ ನೇರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ ಪ್ರತೀ ದಿನ ಚಿತ್ರದ ಕುರಿತಾಗಿ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸ್ವತಃ ವಿಡಿಯೋಗಳನ್ನು ಮಾಡಿ ಕಳಿಸುತ್ತಿದ್ದಾರೆ ಎಂದು ಹೇಳಿದ ನಿರ್ದೇಶಕ ರಾಜೇಶ್ ಆನಂದಲೀಲಾ ತಮ್ಮ ಮೊದಲ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. In the joy of success, D.R. 56

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…