ಅಂಗೈಯಲ್ಲಿ ಆರೋಗ್ಯ :- ಅರಿಶಿನ ಭಾಗ – 1

ಅರಿಶಿನ ಶುಭಕಾರ್ಯಗಳ ಮಂಗಳ ದ್ರವ್ಯ. ಇದನ್ನು ಪೂಜಾಕಾರ್ಯಗಳಲ್ಲಿ ಹಾಗೂ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಇದನ್ನು ಸೌಭಾಗ್ಯದ ಸಂಕೇತವೆಂದು ಹೇಳುತ್ತಾರೆ. “ಸ್ತ್ರೀಣಾಂ ಭೂಷಣಾಂ ಮತ” ಎಂಬ ನುಡಿಯುಂಟು, ಅಂದರೆ ಅರಿಶಿನವು ಸ್ತ್ರೀಯರಿಗೆ ಭೂಷಣವಾಗಿದೆ.

ಈ ಅರಿಶಿನವು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಕ್ರಿಮಿನಾಶಕ, ಜೀರ್ಣಕಾರಕ, ರಕ್ತಶೋಧಕ ಹಾಗೂ ಕಫ ನಿವಾರಕ ಗುಣಗಳಿರುವು ದರಿಂದ, ಮೊದಲಿನಿಂದಲೂ, ಇದನ್ನು ಆಹಾರದಲ್ಲಿ ಬಳಸುವ ಪದ್ಧತಿಯನ್ನು ಮಾಡಿದ್ದಾರೆ. ಇದರಿಂದ ಆಹಾರದ ಮಾಧುರ್ಯತೆ(ರುಚಿ) ಹೆಚ್ಚಾಗಿರುತ್ತದೆ. ಸುಗಂಧಕರ ಹಾಗೂ ಹಿತಕರ ಬಣ್ಣವನ್ನು ಕೊಡುತ್ತದೆ.health tips kannada 6

ಉತ್ತಮವಾದ ಆರೋಗ್ಯವನ್ನು ಪಡೆಯಲು ಅರಿಶಿನವನ್ನು ಉಪಯೋಗಿಸಿದರೆ, ಇದು ವಾತಹರವಾಗಿ ಹಾಗು ವಿಷಹರವಾಗಿ ಕೆಲಸ ಮಾಡುತ್ತದೆ.

ಅರಿಶಿನದ ಉಪಯೋಗಗಳು

ಅಡಿಗೆಗಿಂತ ಹೆಚ್ಚಾಗಿ ಔಷಧವಾಗಿ ಹಾಗೂ ಸೌಂದರ್ಯವರ್ಧಕವಾಗಿ ಉಪಯೋಗಿಸಲಾಗುತ್ತದೆ. ಅದರ ಉಪಯೋಗದ ವಿವರಗಳು ಯಾವುದೆಂದರೆ:health tips kannada 5 2

1. ಚರ್ಮರೋಗ: ಅರಿಶಿನದ ಪುಡಿಗೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಅಂಗಾಂಗಗಳಿಗೆ ಲೇಪಿಸಿ ಸ್ನಾನ ಮಾಡುವುದರಿಂದ, ಚರ್ಮರೋಗಗಳು ಬರುವುದಿಲ್ಲ.

 

2. ತುರಿಕೆ: ಅರಿಶಿನದ ಪುಡಿ ಹಾಗೂ ಕರಿಮೆಣಸಿನ ಪುಡಿಯನ್ನು ಸಮಭಾಗವಾಗಿ ತೆಗೆದುಕೊಂಡು ಎಳ್ಳೆಣ್ಣೆಯಲ್ಲಿ ಕಲೆಸಿ ಹಚ್ಚಿದರೆ ತುರಿಕೆ ವಾಸಿಯಾಗುತ್ತದೆ.health tips kannada 4 1

 

3. ಇಸುಬು (Dry Eczema): ಅರಿಶಿನದ ಕೊಂಬು ಹಾಗೂ ಅಳಲೆಕಾಯಿಯನ್ನು ಮಜ್ಜಿಗೆಯಲ್ಲಿ ತೇಯ್ದು ಹಚ್ಚಿದರೆ ಇಸುಬು ವಾಸಿಯಾಗುತ್ತದೆ.

 

4. ಕಜ್ಜಿ ಹುಳಕಡ್ಡಿಗೆ: ಅರಿಶಿನದ ಕೊಂಬನ್ನು ಗೋಮೂತ್ರದಲ್ಲಿ ತೇಯ್ದು ಕಜ್ಜಿ, ಹುಳಕಡ್ಡಿ ಇರುವ ಸ್ಥಳದಲ್ಲಿ ಲೇಪಿಸಿದರೆ ರೋಗವು ನಿರ್ಮೂಲವಾಗುತ್ತದೆ.health tips kannada 3 2

 

5. ಅಂಗೈ, ಅಂಗಾಲುಗಳ ಬಿರುಕು ಹಾಗೂ ಉರಿ: ಅಂಗೈ ಅಂಗಾಲುಗಳಲ್ಲಿ ಬಿರುಕು ಹಾಗೂ ಬಿರುಕಿನಿಂದ ಉಂಟಾಗುವ ಉರಿ ಮತ್ತು ಮುಖದ ಚರ್ಮ ಬಿರಿಯುವುದನ್ನು ತಡೆಯಲು ಅರಿಶಿನದ ಕೊಂಬನ್ನು ಹಾಲಿನ ಕೆನೆಯಲ್ಲಿ ತೇಯ್ದು ಹಚ್ಚಿದರೆ ವಾಸಿಯಾಗುತ್ತದೆ.

 

ಮುಂದುವರೆಯುವುದು……….

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…