ಗರಡಿಗೆ ಇನ್ನೊಂಚೂರು ಜರಡಿ ಹಿಡೀಬೇಕಿತ್ತು!

garadi review

Garadi 3/5

ಮಲ್ಟಿ ಜಿಮ್ಮುಗಳ ಜಮಾನಾದಲ್ಲಿ ಗರಡಿಮನೆ ಕಲ್ಚರು ಬಹುತೇಕ ಕಾಣೆಯಾಗಿದೆ. ಈ ಹೊತ್ತಿನಲ್ಲಿ ಯೋಗರಾಜ ಭಟ್ಟರು ಧಿಗ್ಗನೆ ಎದ್ದು ಕುಂತು ʻಗರಡಿʼ Garadi Review ಎನ್ನುವ ಸಿನಿಮಾವನ್ನು ರೂಪಿಸಿದ್ದಾರೆ. ಇದೇ ವಾರ ಈ ಚಿತ್ರ ತೆರೆಗೆ ಬಂದಿದೆ.garadi review

ಗರಡಿ ಮನೆಯಲ್ಲಿ ತಯಾರಾದವರ ಜಂಗೀ ಕುಸ್ತಿಯ ಜೊತೆಗೆ ಶ್ರೀಮಂತ ಮನೆತನದ ಪ್ರತಿಷ್ಟೆಯೂ ಸೇರಿಕೊಂಡಿರುತ್ತದೆ. ಕುಸ್ತಿ ಮತ್ತು ಅದರ ಗೆಲುವು ತನ್ನ ಮನೆತನಕ್ಕಷ್ಟೇ ಸೀಮಿತವಾಗಿರಬೇಕು ಅಂತಾ ಬಯಸಿದವನು ರಾಣೆ. ನಿಯತ್ತಿನಿಂದ ಆಡಿ ಗೆದ್ದ ಬಂಡೆ ಸೀನಪ್ಪನ ಕುತ್ತಿಗೆ ಮುರಿದು ಕೊಂದಿರುತ್ತಾನೆ. ಬಂಡೆ ಸೀನನ ಇಬ್ಬರು ಮಕ್ಕಳು ಅನಾಥರಾಗಿರುತ್ತಾರೆ. ಒಬ್ಬ ಅಪರಾಧ ಮಾಡಿ ಜೈಲು ಸೇರುತ್ತಾನೆ. ಮತ್ತೊಬ್ಬನನ್ನು ಗರಡಿ ಮನೆಯ ಕೋರಾಪಿಟ್ ರಂಗಪ್ಪ ಸಾಕಿ ಬೆಳೆಸಿರುತ್ತಾನೆ. ಯಾವ ಕಾರಣಕ್ಕೂ ಈ ಹುಡುಗ ಕುಸ್ತಿ ಪಟ್ಟುಗಳನ್ನು ಕಲಿಯಬಾರದು ಅನ್ನೋದು ರಂಗಪ್ಪನ ನಿರ್ಧಾರ. ಆದರೆ ಹೀರೋ ಸೂರ್ಯ ಅಖಾಡಕ್ಕೆ ಇಳಿಯದೇನೇ ಏಕಲವ್ಯನಂತೆ ಹೇಗೆ ಕುಸ್ತಿ ಕಲಿಯುತ್ತಾನೆ? ಮೊಬೈಲು ಹಿಡಿದು ವಿಡಿಯೋ ಮಾಡುತ್ತಾ ತಿರುಗುವ ಹುಡುಗಿಯಿಂದ ಎದುರಾಗುವ ಘಟನೆಗಳೇನು? ರಾಣೆ ಕುಟಂಬದ ಕುಡಿಗಳು ಏನೇನು ಅನಾಹುತ ಮಾಡುತ್ತಾರೆ? ಅದರ ಪ್ರತಿಫಲಗಳೇನು? ಎಂಬಿತ್ಯಾದಿ ವಿಚಾರಗಳ ಸುತ್ತ ಬೆಸೆದುಕೊಂಡ ಕತೆ ʻಗರಡಿʼ ಚಿತ್ರದ್ದು.garadi review

ದನ ಕಾಯೋನು ನಂತರ ಯೋಗರಾಜಭಟ್ಟರು ಕೈಯಿಟ್ಟಿರುವ ಭಿನ್ನ ಪ್ರಾಕಾರದ ಕಲಾಕೃತಿ ಇದು. ಯಾವಾಗಲೂ ಪ್ರೀತಿ, ತುಂಟಾಟಗಳ ಜೊತೆ ಗಂಭೀರವಾದ ಪ್ರೇಮಕತೆಯನ್ನು ಹೇಳುವ ಯೋಗರಾಜ ಭಟ್ಟರು ಈ ಸಲ ತಮ್ಮದಲ್ಲದ ಕಥಾಸ್ತುವನ್ನು ಕೈಗೆತ್ತಿಕೊಂಡು ಪ್ರಯೋಗ ನಡೆಸಿದ್ದಾರೆ. ಇಡೀ ಸಿನಿಮಾವನ್ನು ಒಂದು ಹಿಡಿಯಲ್ಲಿಡಿದು ನೋಡಿದಾಗ ಇನ್ನೊಂದಿಷ್ಟು ಗಟ್ಟಿತನ ಬೇಕಿತ್ತು ಅನ್ನಿಸುತ್ತದೆ. ಯಶಸ್ ಸೂರ್ಯ ವೃತ್ತಿ ಜೀವನದಲ್ಲಿ ಸಿಕ್ಕಿರುವ ಅತೀ ದೊಡ್ಡ ಅವಕಾಶ ಇದು. ಸಾಧ್ಯವಾದಷ್ಟೂ ಶ್ರಮಿಸಿ ಯಶಸ್ ಪಾತ್ರ ನಿರ್ವಹಿಸಿದ್ದಾರೆ. ತೆರೆಮೇಲೆ ಕೋರಾಪಿಟ್ ರಂಗಣ್ಣನ ಪಾತ್ರದಲ್ಲಿ ಸ್ವತಃ ನಿರ್ಮಾಪಕರಾಗಿರುವ ಬಿ.ಸಿ.ಪಾಟೀಲ್ ಮತ್ತು ಅವರ ಖಾಸಾ ಅಳೀಮಯ್ಯ ಸುಜಯ್ ಬೇಲೂರು ಪ್ರಮುಖ ಖಳನಾಗಿ ಕಾಣಿಸಿರುವುದು ಬಹುಶಃ ಯಶಸ್ ಸೂರ್ಯ ಸ್ಕ್ರೀನ್ ಸ್ಪೇಸನ್ನು ಕಡಿಮೆ ಮಾಡಿರಲೂ ಬಹುದು!garadi review

ಇದರ ಜೊತೆಗೆ ಕಡೆಯ ಹದಿನೈದು ನಿಮಿಷಗಳಷ್ಟು ನಟ ದರ್ಶನ್ ಅವರ ಪಾಲಾಗಿದೆ. ಹಿಂದೆ ʻಚೌಕʼ ಸಿನಿಮಾದಲ್ಲಿ ದರ್ಶನ್ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡು ಮ್ಯಾಜಿಕ್ ಸೃಷ್ಟಿಸಿದ್ದರು. ʻಗರಡಿʼ ಸಿನಿಮಾದಲ್ಲಿ ಕೂಡಾ ಹೆಚ್ಚೂ ಕಡಿಮೆ ಅದೇ ರಿಪೀಟ್ ಆಗಿದೆ. ದರ್ಶನ್ ಪಾಲ್ಗೊಂಡಿರುವ ದೃಶ್ಯ ಬೇರೆಯದ್ದೇ ಕ್ವಾಲಿಟಿಯಲ್ಲಿ ರೂಪುಗೊಂಡಿದೆ. ದರ್ಶನ್ ಅವರ ಭಾಗವನ್ನು ಹೊರತು ಪಡಿಸಿ ಉಳಿದಂತೆ ಚಿತ್ರದ ಬೇರೆ ದೃಶ್ಯಗಳ ಛಾಯಾಗ್ರಹಣ ಅಲ್ಲಲ್ಲಿ ಕೈಕೊಟ್ಟಿದೆ. ನಿರಂಜನ್ ಬಾಬು ಸುಮ್ಮನೇ ಕ್ಯಾಮೆರಾವನ್ನು ಅಲುಗಾಡಿಸಿ ಡಿಸ್ಟರ್ಬ್ ಮಾಡಿದ್ದಾರೆ. ಹರಿಕೃಷ್ಣ ಸಂಗೀತ ನಿರ್ದೇಶನದ ʻಅನಿಸಬಹುದು ನಿನಗೆ…ʼ ಹಾಡು ತುಂಬಾನೇ ಮುದ್ದಾಗಿದೆ. ಶಶಾಂಕ್ ಶೇಷಗಿರಿ ಹಾಡಿರುವ ಗರಡಿ ಟೈಟಲ್ ಸಾಂಗ್ ಸಖತ್ತಾಗಿದೆ. ನಿಶ್ವಿಕಾ ನಾಯ್ಡು ಹಲಿಗಿಯನ್ನು ಜಬರ್ದಾಸ್ತಾಗಿ ಕುಣಿಸಿದ್ದಾರೆ!garadi review

ನಟನೆಯ ವಿಚಾರಕ್ಕೆ ಬಂದರೆ, ಕೋರಾಪಿಟ್ ರಂಗಪ್ಪನ ಪಾತ್ರಕ್ಕೆ ಬಿಸಿ ಪಾಟೀಲ್ ಹೇಳಿಮಾಡಿಸಿದಂತಿದ್ದಾರೆ. ಸುಜಯ್ ಬೇಲೂರು ದನಿ ಚೆಂದ ಇದೆ. ಇನ್ನೊಂದಿಷ್ಟು ಪಳಗಿದರೆ ಪರ್ಮನೆಂಟಾಗಿ ನಟನಾಗಿ ಉಳಿಯಬಹುದು. ದೊಡ್ಡ ಗಾತ್ರದ ರಘು ಎನ್ನುವ ನಟ ನೋಡಲಷ್ಟೇ ಶಕ್ತಿಶಾಲಿ. ನಟನೆ ತುಂಬಾನೇ ವೀಕು. ರವಿಶಂಕರ್ ಎಂದಿನ ನಟನೆಯ ಜೊತೆಗೆ ಅಲ್ಲಲ್ಲಿ ಕಣ್ಣು ಮಿಟುಕಿಸಿ ಬೋನಸ್ಸು ಕೊಟ್ಟಿದ್ದಾರೆ. ಸೋನಲ್ ಪಾತ್ರದ ರೀತಿಯೇ ಕೃತಕವಾಗಿರುವುದರಿಂದ ಸಹಜವಾಗಿ ಏನೂ ಬಯಸುವಂತಿಲ್ಲ. ಧರ್ಮಣ್ಣ ಕಡೂರು ಮಾತ್ರ ಯಥಾಪ್ರಕಾರವಾಗಿ ಸೀರಿಯಸ್ಸಾಗಿ ನಟಿಸಿ, ನಗಿಸುತ್ತಾರೆ!The third song Garadi

ಘಮಘಮ ಪುಳಿಯೋಗರೆ ಮಾಡುವ ಅಡುಗೆ ಭಟ್ಟ ಏಕಾಏಕಿ ಬಿರಿಯಾನಿ ಬೇಯಿಸಿ ಬಡಿಸಿದಂತೆ ಭಟ್ಟರು ʻಗರಡಿʼಯನ್ನು ಕಟ್ಟಿ ತೆರೆಗರ್ಪಿಸಿದ್ದಾರೆ. ತೀರಾ ಫ್ಲೇವರು ಕೆಟ್ಟಿಲ್ಲ ಎನ್ನುವ ಸಮಾಧಾನದೊಂದಿಗೆ ʻಗರಡಿʼಯನ್ನು ಎಲ್ಲ ವರ್ಗದವರೂ ಕೂತು ನೋಡಬಹುದು!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…