ಮನಸ್ಸಿನ ತುಂಬಾ ಹಾರಾಡುವ ವರ್ಣಮಯ ಗಾಳಿಪಟ!

Gaalipata - 2 4/5

ಮುಂಗಾರು ಮಳೆ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಮುರಿದು ಹೊಸ ಶಖೆ ಆರಂಭಿಸಿದವರು ನಿರ್ದೇಶಕ ಯೋಗರಾಜ್‌ ಭಟ್ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌. ಆ ನಂತರ ಗಾಳಿಪಟ ಮತ್ತು ಮುಗುಳುನಗೆಯಲ್ಲಿ ಒಂದಾಗಿದ್ದ ಈ ಕಾಂಬಿನೇಷನ್ನಿನ ನಾಲ್ಕನೇ ಸಿನಿಮಾ ಗಾಳಿಪಟ-೨. ಈ ಯಶಸ್ವೀ ಜೋಡಿಯ ಗಾಳಿಪಟ-೨ ಯಾವ ಎತ್ತರಕ್ಕೆ ಹಾರಬಹುದು? ಎಷ್ಟರ ಮಟ್ಟಿಗೆ ರಂಜಿಸಬಲ್ಲದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೀಗ ಉತ್ತರವೂ ಸಿಕ್ಕಿದೆ…..gaalipata 2 kannada movie review

ಊರು ಬಿಟ್ಟು ಜಗತ್ತಿನ ಮೂಲೆಮೂಲೆಯಲ್ಲಿ ದಿಕ್ಕಾಪಾಲಾದ ಮೂವರು ಸ್ನೇಹಿತರು. ಒಂದು ಸೇರುತ್ತಾರೆ. ಅದು ತಮ್ಮ ಪ್ರೀತಿಯ ಕನ್ನಡ ಮೇಷ್ಟ್ರಿಗೆ ಅದೇನೋ ಹುಚ್ಚು ಹಿಡಿದಿದೆ. ಅವರನ್ನು ಕರೆದುಕೊಂಡು ಹೋಗಿ ಕೆಟ್ಟಿರುವ ಅವರ ತಲೆಯನ್ನು ಸರಿ ಮಾಡಿಸಬೇಕು ಅನ್ನೋದು ಮೂಲ ಉದ್ದೇಶ. ಅದರ ಜೊತೆಗೇ ಕತೆ ಫ್ಲಾಶ್‌ ಬ್ಯಾಕಿನ ಕಡೆಗೆ ಹೊರಳಿಕೊಳ್ಳುತ್ತೆ…gaalipata 2 kannada movie review

ಕಾಲೇಜು ಹುಡುಗರ ಚೇಷ್ಟೆ, ಕುಚೇಷ್ಟೆಗಳು, ಮಾಡಿಕೊಂಡ ಯಡವಟ್ಟು, ಎಕ್ಸಾಮು, ಲವ್ವು, ಪರೀಕ್ಷೆಯ ಲಫಡಾ, ಡಿಬಾರು, ಮಾನ, ಅವಮಾನಗಳ ಸುತ್ತ ಗಾಳಿಪಟ ಗಿರಕಿ ಹೊಡೆಯುತ್ತದೆ. ಮೊದಲ ಭಾಗ ನೋಡಿ ಪಟಕ್ಕಿಂತಾ ಬಾಲಂಗೋಚಿಯೇ ಉದ್ದ ಇದೆಯಲ್ಲಾ? ಇದರ ಸೂತ್ರ ಎಲ್ಲಿದೆ ಅಂತೆಲ್ಲಾ ಅನ್ನಿಸುವುದು ಸಹಜ. ಆದರೆ ದ್ವಿತೀಯಾರ್ಧ ತೆರೆದುಕೊಳ್ಳುತ್ತಿದ್ದಂತೇ…. ಸೂತ್ರದ ಸಿಕ್ಕು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ. ಆರಂಭದಲ್ಲಾದ ಗೊಂದಲ, ಹುಟ್ಟಿಕೊಂಡ ಪ್ರಶ್ನೆಗಳಿಗೆಲ್ಲಾ ಇಲ್ಲಿ ಸ್ಪಷ್ಟ ಉತ್ತರ ಸಿಗುತ್ತಾ ಹೋಗುತ್ತದೆ…gaalipata 2 kannada movie review

ತೀರಾ ಗಂಭೀರವಾದ ವಿಚವಾರವೊಂದನ್ನು ಉಡಾಫೆ ಶೈಲಿಯಲ್ಲಿ ಹೇಳುವುದು ಯೋಗರಾಜ್‌ ಭಟ್‌ ಎನ್ನುವ ಟಿಪಿಕಲ್‌ ಟ್ಯಾಲೆಂಟಿಗೆ ಮಾತ್ರ ಸಿದ್ದಿಸಿರುವ ಕಲೆ. ಇತರೆ ಹೀರೋಗಳೊಂದಿಗೆ ಸಿನಿಮಾ ಮಾಡಿದಾಗ ಭಟ್ಟರು ಈ ಸಿನಿಮಾದಲ್ಲಿ ಕಳೆದುಹೋಗುವ ಮಗುವಿನಂತೆಯೇ ಕೈತಪ್ಪಿಬಿಟ್ಟಿರುತ್ತಾರೆ. ಆದರೆ, ಗಣೇಶ್‌, ದಿಗಂತ್‌, ಪವನ್‌ ಜೊತೆ ಸೇರಿದಾಗ ಮಾತ್ರ ಮತ್ತೆ ಹಿಡಿತಕ್ಕೆ ಸಿಗುತ್ತಾರೆ. ಇಲ್ಲಿ ಆಗಿರುವುದೂ ಅದೇ, ತಮ್ಮದೇ ಕೆಲವೊಂದು ಕೃತಿಗಳಲ್ಲಿ ಮಾಡಿದ ಯಾವ ತಪ್ಪನ್ನೂ ಭಟ್ಟರು ಇಲ್ಲಿ ಮಾಡಿಲ್ಲ. ಯುವ ಪೀಳಿಗೆಯ ನಾಡಿ ಮಿಡಿತ ಅರಿತು ಸಿನಿಮಾ ಕಟ್ಟುವ ಭಟ್ರು ಅದರ ಜೊತೆಗೇ ಹಿರಿ ಜೀವಗಳ ಸಂಕಟಗಳನ್ನೂ ಸೆರೆ ಹಿಡಿಯುತ್ತಾರೆ.gaalipata 2 kannada movie review

ಯಾರಿಗೂ ಕೇಡು ಬಯಸದ ಹುಡುಗ, ಎಲ್ಲರನ್ನೂ ಒಂದುಮಾಡಲು ಬಯಸುವವನು ಯಾಕೆ ಎಲ್ಲರಿಂದಲೂ ಮೂದಲಿಕೆ, ದೂಷಣೆಗೆ ಒಳಗಾಗುತ್ತಾನೆ? ಕಳೆದುಕೊಂಡವರನ್ನು ಹುಡುಕುವರು ಎಷ್ಟರ ಮಟ್ಟಿಗೆ ತಮ್ಮವರನ್ನು, ತಮ್ಮತನವನ್ನು ದಕ್ಕಿಸಿಕೊಳ್ಳುತ್ತಾರೆ ಅನ್ನೋದು ಚಿತ್ರದ ಅಂತಿಮ ಗುಟ್ಟು.gaalipata 2 kannada movie review

ಗಣೇಶ್ ಪರಿಪೂರ್ಣವಾಗಿ ಮನಸ್ಸು ಕೊಟ್ಟು ಅಭಿನಯಿಸಿದ್ದಾರೆ. ಸಿಕ್ಕಾಪಟ್ಟೆ ಮಾತಾಡದೆಯೂ ಮನಸ್ಸಿಗೆ ಹತ್ತಿರವಾಗುತ್ತಾರೆ. ದಿಗಂತ್‌ ಮತ್ತು ಪವ್‌ ಕೂಡಾ ಅದಕ್ಕೆ ಸಾಥ್‌ ನೀಡಿದ್ದಾರೆ. ಮೂವರು ನಾಯಕಿರಯ ನಡುವೆ ಅತಿಥಿ ಪಾತ್ರದಲ್ಲಿ ಬಂದು ಹೋಗುವ ನಿಶ್ವಿಕಾ ಹೆಚ್ಚು ಇಷ್ಟವಾಗುತ್ತಾರೆ.gaalipata 2 kannada movie review

ಇನ್ನುಳಿದಂತೆ ಅರ್ಜುನ್‌ ಜನ್ಯ ಸಂಗೀತದಲ್ಲಿ ಬಂದಿರುವ ಮೆಲೋಡಿ ಹಾಡುಗಳು ಮತ್ತು ದೇವ್ಲೇ ದೇವ್ಲೇ ಹೆಚ್ಚು ಇಷ್ಟವಾಗುತ್ತವೆ. ಸಂತೋಷ್‌ ರೈ ಪತಾಜೆ ಕ್ಯಾಮೆರಾ ಕೆಲಸ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಮಳೆ, ಹಸಿರು, ಹಿಮ, ಮುದ್ದಾದ ಮೂರು ಜೋಡಿಗಳನ್ನೂ ಕೊಟ್ಟರೆ ಪರದೆಯನ್ನು ಎಷ್ಟೆಲ್ಲಾ ಚೆಂದ ಮಾಡಬಹುದೋ ಅಷ್ಟು ಸುಂದರಗೊಳಿಸಿದ್ದಾರೆ.gaalipata 2 kannada movie review ಮಗನನ್ನು ಕಳೆದುಕೊಂಡ ಸತತ 25 ವರ್ಷ ನರಳುವ ಮೇಷ್ಟ್ರ ಪಾತ್ರದಲ್ಲಿ ಅನಂತ್‌ ನಾಗ್ ಅಭಿನಯ ಅದ್ಭುತ. ರಂಗಾಯಣ ರಘು ಕೂಡಾ ಆಪ್ತವಾಗಿ ನಟಿಸಿದ್ದಾರೆ. ಒಟ್ಟಾರೆ ಪ್ರತಿಯೊಬ್ಬರೂ ನೋಡಿ ಎಂಜಾಯ್‌ ಮಾಡಬಹುದಾದ ಸಿನಿಮಾ ಗಾಳಿಪಟ-೨…..

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…