ಅಂಗೈಯಲ್ಲಿ ಆರೋಗ್ಯ “ಅಮೃತಬಳ್ಳಿ” ಔಷಧೀಯ ಗುಣಗಳು 1

Amruthaballi Plant Benefits

Amruthaballi Plant Benefits ಈ ಮೂಲಿಕೆ ಆಯುರ್ವೇದದಲ್ಲಿ ಅತ್ಯಂತ ಮಹತ್ತರವಾದದ್ದು.

ಇದರ ಆಯಸ್ಸು ಬಹಳ ಕಾಲದವರೆಗೂ ಜೀವಂತವಾಗಿರುವಂತದ್ದು, ಇದು ಒಳ್ಳೆಯ ರೂಪದಲ್ಲಿ ಇರುವಂಥದ್ದು. ಈ ಲತೆ ಯಾವ ಮರಕ್ಕೆ ಹಬ್ಬುತ್ತದೆಯೋ ಅದರ ಗುಣ ಧರ್ಮಗಳು ಸಹ ಇದಕ್ಕೆ ಬರುತ್ತದೆ. ಹಾಗಾಗಿ ಮಾವು, ಬೇವು, ಈ ರೀತಿ ಉಪಯುಕ್ತ ಮರಗಳಿಗೆ ಹಬ್ಬಿಸುವುದು ಒಳ್ಳೆಯದು. ಅದರಲ್ಲೂ ಬೇವಿನ ಮರಕ್ಕೆ ಹಬ್ಬಿಸಿದರೆ ಆ ಬಳ್ಳಿಯ ಔಷಧೀಯ ಗುಣಗಳು ಅಧಿಕ. ಈ ಲತೆಯನ್ನು ಹಳ್ಳಿಗರು ಚೆನ್ನಾಗಿ ಗುರುತಿಸುತ್ತಾರೆ.Benefits of Amrutha Balli: Amazing Health Benefits of Amrutha Balli leaves |Benefits of Amrutha Balli: ಅಮೃತದಷ್ಟು ಶಕ್ತಿ ಹೊಂದಿರುವ ಅಮೃತ ಬಳ್ಳಿಯ ಪ್ರಯೋಜನಗಳು News in Kannada

ಎಲ್ಲಾ ಬೇಲಿಗಳಲ್ಲೂ, ಗುಡ್ಡಗಾಡುಗಳಲ್ಲೂ ಎಲ್ಲಾ ಕಡೆಯೂ ದೊರೆಯುವಂತದ್ದು, ಇದು ಅನೇಕ ರೀತಿಯ ವ್ಯಾಧಿಗಳನ್ನು ಗುಣಪಡಿಸುವಂತಹ ಅದ್ಭುತ ಗುಣವನ್ನು ಹೊಂದಿದೆ. ಹಾಗಾಗಿ ಇದಕ್ಕೆ ‘ಅಮೃತಾ’ ಎನ್ನುವ ಹೆಸರು ಬಂದಿರುವಂತಹದ್ದು, ಅಮೃತ ಬಳ್ಳಿಯ ಜೊತೆ ಅಳಲೆಕಾಯಿ ಹಾಗೂ ನೆಲ್ಲಿಕಾಯಿಗಳ ಸಂಯೋಗದಿಂದ ಸೇವನೆ ಮಾಡಿದರೆ ಕಫ, ಪಿತ್ತ, ವಾತ ಮೂರರ ಸಮತ್ವವನ್ನು ಚೆನ್ನಾಗಿ ಕಾಪಾಡುತ್ತದೆ. ಮೂರರ ಸಂಯೋಜನೆಯು ನಾನಾ ವ್ಯಾಧಿಗಳನ್ನು ಹೊಡೆದೋಡಿಸುವ ಗುಣದಿಂದ ಕೂಡಿದೆ. ಬಲಿತ ಒಂದು ಕಡ್ಡಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಇಟ್ಟರೆ ಅದು ತನ್ನಷ್ಟಕ್ಕೆ ತಾನೇ ಚಿಗುರಿಕೊಳ್ಳುತ್ತದೆ. ಇದು ಬಹಳ ಬೇಗ ಸಾಯುವುದಿಲ್ಲ.Tinospora cordifolia (Giloy, Amrutha balli) – FTLON

ನೀರು ಹಾಕದಿದ್ದರು ಇದು ತನ್ನಷ್ಟಕ್ಕೆ ತಾನೇ ಚಿಗುರುತ್ತದೆ. ಇದೇ ಕಾರಣಕ್ಕಾಗಿ ಇದನ್ನು ಅಮೃತವಲ್ಲರೀ ಎಂದು ಕರೆಯುವುದುಂಟು. ಮನುಷ್ಯನಿಗೆ ಬರುವ ಮುದಿತನವನ್ನು ತಡೆಯುವಂತಹ ಶಕ್ತಿ ಇರುವಂತದ್ದು, ಮಾನವನ ನಿರ್ಬಲತೆಯನ್ನು ದೂರಮಾಡು ವಂತದ್ದು, ಜೀವನೀಯ ಶಕ್ತಿಯನ್ನು ಒದಗಿಸುವಂತಹದ್ದು. ಹಾಗಾಗಿ ಇದಕ್ಕೆ ‘ರಸಾಯನೀ’, ‘ವಯಸ್ಸಾ’ ಎಂಬ ಹೆಸರುಗಳು ಅನ್ವರ್ಥವಾಗಿದೆ. ತೆಳ್ಳಗಿರುವ ಹೊಸ ಗಿಡಕ್ಕಿಂತ ದಪ್ಪನಾದ ಕಾಂಡವಿರುವ ಲತೆಯಲ್ಲಿ ಔಷಧೀಯ ಗುಣಗಳು ಜಾಸ್ತಿ ಇರುತ್ತದೆ. ಮತ್ತು ಅದರಲ್ಲಿ ಸತ್ವವೂ ಜಾಸ್ತಿ ಇರುತ್ತದೆ.Tinospora cordifolia - Amrutha balli - Ayurwiki

ಈ ಮೂಲಿಕೆಯು ಸಿಹಿ ಮತ್ತು ಒಗರು ಗುಣಗಳಿಂದ ಕೂಡಿದೆ. ಆದರೆ ಪರಿಪಾಕದ ನಂತರ ಮಧುರತೆಯನ್ನು ಪಡೆದುಕೊಳ್ಳುತ್ತದೆ. ಇದು ತ್ರಿದೋಶಗಳನ್ನು ಶಾಂತಿಗೊಳಿಸು ವಂತಹದು. ಅಗ್ನಿವರ್ಧಕ, ಪಿತ್ತಶಾಮಕ, ಹೃದಯಕ್ಕೆ ಹಿತಕರವಾದದ್ದು. ರಕ್ತಶೋಧಕ, ಕಟ್ಟು ಮೂತ್ರ ನಿವಾರಕ, ರಕ್ತವರ್ಧಕ ಗುಣಗಳಿಂದ ಕೂಡಿದೆ. ಬಾಯಾರಿಕೆ, ದಾಹನಿವಾರಕ, ಕೆಮ್ಮು, ರಕ್ತಹೀನತೆ, ವಾತ ರಕ್ತ, ಚರ್ಮದೋಷ ನಿವಾರಕ, ಮೂಲವ್ಯಾಧಿ, ಯಕೃತ್ತಿನ ವಿಕಾರ, ಸಂಧಿವಾತಕ್ಕೆ ರಾಮಬಾಣ.Alpha Amrutha Balli Powder, 100 Gram at ₹ 70/packet in Bengaluru | ID: 26328694691

ಎಲ್ಲಾ ಬಗೆಯ ಜ್ವರಗಳು, ಮಲೇರಿಯಾ, ಡೆಂಗ್ಯೂ, ಅಜೀರ್ಣ ಜ್ವರ ಎಲ್ಲಕ್ಕೂ ಅಮೃತಕ್ಕೆ ಸಮನಾದ ಅಮೃತಬಳ್ಳಿಯಿಂದ ಉತ್ತಮ ಚಿಕಿತ್ಸೆಯಿದೆ. ಬೇರೆ ಪದ್ಧತಿಯ ಚಿಕಿತ್ಸೆ ಮಾಡಿದಾಗಲೂ, ನಂತರದಲ್ಲಿ ಒಳಗಡೆ ಇನ್ನೂ ಜ್ವರದ ಅಂಶ ಇರುತ್ತದೆ. ಅಂತಹ ಸಂದರ್ಭದಲ್ಲಿ ಅಮೃತಬಳ್ಳಿಯ ಚೂರ್ಣ, ಸತ್ವ ಅಥವಾ ಕಷಾಯದ ಬಳಕೆಯಿಂದ ಸುಲಭವಾಗಿ ಪರಿಹರಿಸಿಕೊಳ್ಳಬಹುದು.11 Amritavalli Royalty-Free Images, Stock Photos & Pictures | Shutterstock

ಬೇವಿನ ಮರದ ತೊಗಟೆಯ ಒಳಗಿನ ಭಾಗವನ್ನು ಮಲೇರಿಯಾದಂತಹ ಜ್ವರದಲ್ಲಿ ಇದನ್ನು ಸೇರಿಸಿಕೊಡುವುದರಿಂದ ಶರೀರದಲ್ಲಿ ಸ್ವಲ್ಪವೂ ಜ್ವರದ ಅಂಶ ಉಳಿಯುವುದಿಲ್ಲ. ಜೊತೆಗೆ ಶರೀರ ದುರ್ಬಲವಾಗುವುದನ್ನು ತಪ್ಪಿಸುತ್ತದೆ. ಇದು ಸಂಜೀವಿನಿಯಂತಹ ಮೂಲಿಕೆ. ಅಮೃತಬಳ್ಳಿಯ ಎಲ್ಲಾ ಭಾಗಗಳು ಎಲೆ, ಕಾಂಡ, ಬಳ್ಳಿ ಎಲ್ಲವೂ ಉಪಯೋಗಿಸಲು ಸೂಕ್ತ.

ಭಾಗ ಎರಡರಲ್ಲಿ ಮುಂದುವರಿಯುವುದು…..

You Will  Love   Like  These

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…