ಎಲ್ಲವೂ ಇದ್ದು ದುರಂತ ಅಂತ್ಯ ಕಂಡ ಕಲಾವಿದನ ಬದುಕಿನ ಕಥೆ ಇಲ್ಲಿದೆ

■ ‘ಪ್ರಚಂಡ ರಾವಣ’■
ಈಗ ನೀವು ‘ಮಹಾಭಾರತ’ ಸೀರಿಯಲ್’ನಲ್ಲಿ ನೋಡುತ್ತಿರುವ ಬೃಹತ್ ಅರಮನೆಯಂಥಾ ಮನೆ, ಜೇಬು ತುಂಬಾ ಸಂಪಾದನೆ, ಕೈಗೊಬ್ಬ ಕಾಲಿಗೊಬ್ಬ ಆಳು-ಕಾಳು, ನಾಲ್ಕಾರು ಕೋ-ಆಪರೇಟಿವ್ ಸಂಸ್ಥೆಗಳ ಅಧ್ಯಕ್ಷಗಿರಿ, ಎಕರೆಗಟ್ಟಲೆ ಜಮೀನು, ಹತ್ತಾರು ಕಾರುಗಳು, ಗಟ್ಟಿಮುಟ್ಟಾದ ನಂಬಿಕಸ್ತ ಮಕ್ಕಳು, ಆತ್ಮಾಭಿಮಾನಕ್ಕೆ ಮತ್ತೊಂದು ಹೆಸರಿನಂತಿರುವ ಹೆಂಡತಿ…ಎಲ್ಲವೂ ಇದ್ದು ‘ಪ್ರಚಂಡ ರಾವಣ’ನಂತೆಯೇ ಬದುಕು ನಡೆಸಿದ ವಜ್ರಮುನಿ ಎಂಬ ಖಳನಟ ತಮ್ಮ ಕೊನೆಯ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಪಡಬಾರದ ಪಾಡುಪಟ್ಟು ದುರಂತ ಸಾವನ್ನಪ್ಪಿದ ವ್ಯಥೆಯ ಕಥೆಯೇ ಇಂದಿನ ಅಂಕಣದ ವಸ್ತು…
ಇದು 17 ವರ್ಷಗಳ ಹಿಂದಿನ ಕಥೆ. 2003ನೇ ಇಸವಿಯ ಒಂದು ದಿನ ಬೆಂಗಳೂರಿನ ಹೊರವಲಯದಲ್ಲಿರುವ ವಜ್ರಗಿರಿಯ ವಜ್ರಮುನಿಯವರ ಅರಮನೆಗೆ ಹೋದಾಗ ನಾನು ಕಂಡದ್ದಾದರೂ ಏನು?
ಒಂದು ಕಾಲದ ನಟಭಯಂಕರ ತಮ್ಮ ಕಾಲನ್ನು ಎತ್ತಿಎತ್ತಿ ಹಾಕಿ ನಿಧಾನವಾಗಿ ತಮ್ಮ ಕಿರಿಯ ಮಗ ಜಗದೀಶನ ಕೈ ಹಿಡಿದು ಬರುತ್ತಿದ್ದರೆ ಮೊದಲ ಆಘಾತವಾಯಿತು. ಬಿಳಿಯ ಪಂಚೆ, ಬಿಳಿಯ ಶರ್ಟ್’ನಲ್ಲಿ ವಜ್ರಮುನಿಯವರು ಕರ್ರಗೆ ಕಾಣಿಸುತ್ತಿದ್ದರು.

ಕಷ್ಟಪಟ್ಟು ಕುರ್ಚಿಯೊಳಗೆ ತೂರಿಕೊಂಡ ಅವರು ಸೆಟೆದು ನಿಂತ ಬೆರಳುಗಳಿಂದ ತಮ್ಮ ತಲೆಗೂದಲನ್ನು ನೀವಿಕೊಂಡರು. ಅಲ್ಲಲ್ಲಿ ಕಪ್ಪಾದ ಚರ್ಮ, ಮಾಂಸ ಕರಗಿ ಹೋಗಿದಂತಿರುವ ಬಸವಳಿದ ಮುಖ. ದೊಡ್ಡದಾದ ನಿರ್ಜೀವ ಕಣ್ಣುಗಳು. ಎರಡೂ ಕೈಗಳ ತುಂಬಾ ಇಂಜೆಕ್ಷನ್ ಸೂಜಿ ಚುಚ್ಚಿದ ಗುರುತುಗಳು. ಔಷಧಿ, ಮಾತ್ರೆ, ಇಂಜೆಕ್ಷನ್, ಆಪರೇಷನ್, ಡಯಾಲಿಸಿಸ್’ಗಳು ವಜ್ರಮುನಿಯವರ ದೇಹವನ್ನು ಜರ್ಜರಿತವನ್ನಾಗಿ ಮಾಡಿದ್ದುವು. ಕಿವಿಗೊಂದು ಇಯರ್ ಫೋನ್. ಧೂಳಿನಿಂದ ರಕ್ಷಣೆ ಪಡೆಯಲು ಬಾಯಿಗೊಂದು ಮಾಸ್ಕ್… ಇಂಥಾ ವಜ್ರಮುನಿಯವರನ್ನು ನೀವೆಂದಾದರೂ ನೋಡಿದ್ದೀರಾ? ನನಗೋ ಶಾಕ್ ಮೇಲೆ ಶಾಕ್! ವಜ್ರಮುನಿಯವರಿಗೆ ಕಣ್ಣು ಕಾಣಿಸುತ್ತಿದ್ದರೂ ಕಿವಿ ಸಂಪೂರ್ಣ ಕಿವುಡಾಗಿತ್ತು. ಇಯರ್ ಫೋನ್ ಸಿಕ್ಕಿಸಿಕೊಂಡಿದ್ದರೂ ಅದರ ಉಪಯೋಗವೇನೂ ಇರಲಿಲ್ಲ! ನಾನು ಕೇಳಬೇಕಾದ ಪ್ರಶ್ನೆಯನ್ನು ಒಂದು ಹಾಳೆಯ ಮೇಲೆ ಬರೆಯಬೇಕಾಗಿತ್ತು. ನನ್ನ ಪರಮ ಮೋಡಿ ಅಕ್ಷರವನ್ನು ಓದಿ ಬಿಡುವಂಥಾ ಪರಮ ಚಾಣಾಕ್ಷ ವಜ್ರಮುನಿಯವರು! ಇಂಥಾ ಅನಾರೋಗ್ಯಕರ ವಾತಾವರಣದಲ್ಲೂ ಅವರು ಬರೋಬ್ಬರಿ ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಮಾತಾಡಿದರು. ಎಲ್ಲವನ್ನೂ ಬರೆದರೆ ಅದೊಂದು ಬೃಹತ್ ‘ವಜ್ರಾಯಣ’ವಾದೀತು! ಹೀಗಾಗಿ ಈ ಅಂಕಣದ ವ್ಯಾಪ್ತಿಯಲ್ಲಿ ಎಷ್ಟನ್ನು ಹೇಳಬಹುದೋ ಅಷ್ಟನ್ನು ಹೇಳುವ ಪ್ರಯತ್ನ ನನ್ನದು…


ಹಾಗಿದ್ದರೆ ಇಂಥಾ ವಜ್ರದಂಥಾ ಕಠೋರ ಕಲಾವಿದನ ಈ ದುಃಸ್ಥಿತಿಗೆ ಕಾರಣವಾದರೂ ಏನು? ಇದೆಲ್ಲಾ ಆರಂಭವಾದದ್ದು ‘ದಾಯಾದಿ’ ಚಿತ್ರದ ಶೂಟಿಂಗ್ ಸಮಯದಲ್ಲಿ. ಬಹುಶಃ ಅದುವೇ ಕೊನೇ ಚಿತ್ರವಿರಬೇಕು. ಕಾಲು ವಿಪರೀತ ಅನ್ನುವಷ್ಟು ಊದಿಕೊಂಡಿತು. ಮೈಕೈಯೆಲ್ಲಾ ವಿಪರೀತ ನೋವು ಶುರುವಾಗಿ ಬಿಟ್ಟಿತು. ಚಿತ್ರೀಕರಣ ಮುಗಿಸಿ ಬಂದು ಮಲಗಿಕೊಂಡವರು ಎದ್ದೇಳಲಿಲ್ಲ. ಗಾಬರಿ ಬಿದ್ದ ತಂಡದವರೊಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಡಾಕ್ಟ್ರು ಮಾತ್ರೆ ಕೊಟ್ಟರು. ಸ್ವಲ್ಪ ವಾಸಿ ಎಂದೆನಿಸಿತು. ಅದರ ಪವರ್ ಇಳಿದ ಮೇಲೆ ಮತ್ತೆ ಕಾಲು ಊದಲು ಶುರುವಾಯಿತು. ಹೊಟ್ಟೆ ಡುಬ್ಬಾದಂತಾಯಿತು. ಅನಿವಾರ್ಯವಾಗಿ ಸ್ಕ್ಯಾನಿಂಗ್ ಮಾಡಿಸಿಕೊಂಡಾಗ ಕಿಡ್ನಿ ಫೇಲೂರ್ ಆಗಿರೋದು ದೃಢ ಪಟ್ಟಿತು. ಜತೆಗೆ ಹಾರ್ಟ್ ಪ್ರಾಬ್ಲೆಮ್. ಬಿಪಿ, ಶುಗರ್ ಕೂಡಾ ಧಾಳಿಯಿಟ್ಟಿತು. ಬೇರೆ ದಾರಿ ಕಾಣದೇ ಮಕ್ಕಳೆಲ್ಲಾ ಸೇರಿ ತಮ್ಮ ತಂದೆಯನ್ನು ಮಲ್ಯ ಆಸ್ಪತ್ರೆಗೆ ಸೇರಿಸಿದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತರಾದ ವಜ್ರಮುನಿಯವರಿಗೆ ಕಿಡ್ನಿ ಟ್ರಾನ್ಸ್’ಪ್ಲಾಂಟೇಶನ್ ಮಾಡಿಸಲು ಮನೆ ಮಂದಿಯೆಲ್ಲಾ ಸೇರಿ ನಿರ್ಧರಿಸಿದರು. ಅದೂ ಆಯಿತು. ಸ್ವಲ್ಪಯೇ ಸ್ವಲ್ಪ ಚೇತರಿಸಿಕೊಂಡು ದೈನಂದಿನ ಬದುಕಿಗೆ ಇನ್ನೇನು ಹೊಂದಿಕೊಳ್ಳುತ್ತಾರೆ ಎಂದೆನ್ನುವಷ್ಟರಲ್ಲಿ ಟ್ರಾನ್ಸ್’ಪ್ಲಾಂಟ್ ಮಾಡಿಸಿಕೊಂಡ ಕಿಡ್ನಿ ಕೈಕೊಟ್ಟಿತು. ಪ್ರಜ್ಞೆ ತಪ್ಪಿತು. ನಾಲ್ಕು ದಿನ ಬೆಡ್ ರೆಸ್ಟ್. ಅಖಂಡ 365 ದಿನಗಳ ಕಾಲ ಅಕ್ಷರಶಃ ನರಳಿದರು. ಮೂರು ತಿಂಗಳ ಕಾಲ ರೂಮೊಂದರಲ್ಲಿ ಕೂಡಿ ಹಾಕಿದ ಶಿಕ್ಷೆ! ಮುಖಕ್ಕೆ ಬಟ್ಟೆ ಕಟ್ಟಲಾಯಿತು. ಹೊರಗಿನ ಪ್ರಪಂಚದ ಸಂಪರ್ಕವೇ ಇಲ್ಲದೆ ತಿಂಗಳುಗಟ್ಟಲೆ ಕಳೆಯುವ ದೌರ್ಭಾಗ್ಯ!


ಇಂಥಾ ದುರ್ಭರ ಪರಿಸ್ಥಿಯಲ್ಲಿ ವಜ್ರಮುನಿ ಏನು ಹೇಳುತ್ತಿದ್ದರು ಗೊತ್ತಾ? ‘ಬದುಕಿನಲ್ಲಿ ನಾನು ಎಂದೂ ಯಾರಿಗೂ ಹೆದರಿದವನಲ್ಲ, ಕೇಡು ಬಗೆದವನಲ್ಲ. ಆದರೆ ಈ ಕಾಯಿಲೆಗಳು ನನ್ನನ್ನೇ ಹೆದರಿಸಿ ಬಿಟ್ಟವು! ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಓಡಾಡಿಕೊಂಡಿದ್ದವನು ನಾನು. ಈಗ ಹೀಗೆ ಅಸಹಾಯಕನಾಗಿ ಮಲಗಿಕೊಂಡಿರಲೇ ಬೇಕಾದ ಅನಿವಾರ್ಯತೆ. ನಿಜ ಹೇಳಬೇಕು ಅಂದ್ರೆ ನನ್ಗೆ ಬದುಕು ಸಾಕಾಗಿದೆ. ಮನೆಯವರಿಗೆ ಹೊರೆಯಾಗಿ ಹೀಗೆ ಸತ್ತಂತೆ ಹಾಸಿಗೆ ಮೇಲೆ ಮಲಗಿರುವುದಕ್ಕಿಂತಲೂ ಸಾಯುವುದೇ ವಾಸಿ ಎಂಬ ನಿರ್ಧಾರಕ್ಕೆ ಬಂದಿದ್ದೇನೆ…’


– ಹೀಗೆಂದು ಹೇಳಿಕೊಂಡ ಒಂದೇ ತಿಂಗಳಲ್ಲಿ ವಜ್ರಮುನಿಯವರು ಇಹಲೋಕದ ವ್ಯವಹಾರವನ್ನು ಮುಗಿಸಿದ್ದರು. ಈಗಲೂ ಜಗದೀಶ್ ನನ್ನ ಸಂಪರ್ಕದಲ್ಲಿದ್ದಾರೆ. ವಜ್ರಮುನಿಯವರ ವಾಯ್ಸ್ ಕೇಳಬೇಕೆಂದೆನಿಸಿದಾಗಲೆಲ್ಲಾ ನಾನು ಜಗದೀಶ್’ಗೆ ಫೋನ್ ಮಾಡುತ್ತೇನೆ. Ditto ವಾಯ್ಸ್. ನನ್ನ ಪ್ರೀತಿಯ, ಹೃದಯವಂತ ಕಲಾವಿದ ವಜ್ರಮುನಿಯವರ ಜತೆ ಮಾತಾಡಿದ ಗುಂಗು ವಾರಪೂರ್ತಿ ಇರುತ್ತದೆ…

You Will  Love   Like  These

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi

ಇನ್‌ಸ್ಟಂಟ್ ಕರ್ಮ ಫಸ್ಟ್ ಲುಕ್ ಪೋಸ್ಟರ್ ಜನವರಿ...

ಯಶ್ ಶೆಟ್ಟಿ, ಸಲಗ ಖ್ಯಾತಿಯ ಕೆಂಡ ಶ್ರೇಷ್ಠ ಮತ್ತು ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ, ಹರಿ ಮುಖ್ಯಭೂಮಿಕೆಯಲ್ಲಿರುವ ಇನ್‌ಸ್ಟಂಟ್ ಕರ್ಮ ಸಿನಿಮಾವನ್ನು ಈ ಹಿಂದೆ ಡಿಕೆ ಬೋಸ್ ನಿರ್ದೇಶಿಸಿದ್ದ ಸಂದೀಪ್ ಮಹಾಂತೇಶ್ ನಿರ್ದೇಶಿಸಿದ್ದಾರೆ. ಚಿತ್ರವು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಇದನ್ನು March 2022 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು…