ಕನ್ನಡ ಸುಭಾಷಿತ 14

Curved Arrow
Scribbled Underline

ಅಣ್ಣ, ತಂದೆ ಮತ್ತು ಯಾರು ವಿದ್ಯೆಯನ್ನು ಕೊಡುತ್ತಾರೋ ಈ ಮೂವರೂ ತಂದೆಯಸಮಾನರೆಂದು ಧರ್ಮದಿಂದ ನಡೆಯುವವರು ಗೌರವಿಸುತ್ತಾರೆ. 

ಅನ್ಯರ ಆಸ್ತಿಯನ್ನು ಅಪಹರಿಸುವದು , ಪರಸ್ತ್ರೀಯರನ್ನು ಕೆಣಕುವದು , ಸ್ನೇಹಿತರನ್ನು ತ್ಯಜಿಸುವದು -- ಇವು ಮೂರೂ ಸರ್ವನಾಶ ಮಾಡತಕ್ಕ ದೋಷಗಳು.

ಅನ್ನದ ಮೇಲೆ ಸೊಕ್ಕು ತೋರಿಸಿದವ ರೋಗಿಯಾಗುತ್ತಾನೆ. ದುಡ್ಡಿನ ಮೇಲೆ ಸೊಕ್ಕು ತೋರಿಸಿದವ ದರಿದ್ರನಾಗುತ್ತಾನೆ. ಕಾಯಕದ ಮೇಲೆ ಸೊಕ್ಕು ತೋರಿಸಿದವ ನಿರುದ್ಯೋಗಿಯಾಗುತ್ತಾನೆ

ಗುರಿ ಮುಟ್ಟುವದಕ್ಕೆ ಅಂತ ಹೊರಟ ಮೇಲೆ ಹಿಂತಿರುಗಿ ನೋಡಬಾರದು. ಗುರಿ ಮುಟ್ಟುವುದು ನಿದಾನ ಆಗಬಹುದು, ಆದರೆ ಗೆಲ್ಲುವದಂತೂ ಖಚಿತ

ಒಂದು ಕ್ಷಣ ಮೌನವಹಿಸಿದರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು.