ಗಂಧದ ಗುಡಿಯ ಭರವಸೆಯ ನಿರ್ದೇಶಕ – ರವಿಶಂಕರ್ ನಾಗ್

MAVUTA Director Ravishankar nag 22

ಮೈಸೂರ್ ಜಿಲ್ಲೆಯ ಕೃಷ್ಣರಾಜನಗರ ತಾಲೋಕಿನ ” ಕಾಮೇನಹಳ್ಳಿ ” ಎಂಬ ಕುಗ್ರಾಮದಲ್ಲಿ ತಾಯಿ ರತ್ನಮ್ಮ ತಂದೆ ಸ್ವಾಮಿಯವರಿಗೆ ಜನಿಸಿದ ಹಿರಿಯ ಪುತ್ರನೆ “ಮಾವುತ” ಚಿತ್ರದ ನಿರ್ದೇಶಕ ಈ “ರವಿಶಂಕರ್ ನಾಗ್” MAVUTA Director Ravishankar NagMAVUTA Director Ravishankar nag

ಬಡತನದೊಂದಿಗೆ ಭಾಂದವ್ಯ ಬೆಸೆದುಕೊಂಡಿದ್ದ ಇವರಿಗೆ ಒಬ್ಬ ತಮ್ಮ, ಇಬ್ಬರು ತಂಗಿಯರು ಇದ್ದಾರೆ, ದೊಡ್ಡಪ್ಪ ಕಾಳಿದಾಸರವರು ಹಾರ್ಮೋನಿಯಂ ಮಾಸ್ಟರ್ ಆಗಿದ್ದರಿಂದ ಶಂಕರ್ ಗೆ ಬಾಲ್ಯದಿಂದಲೇ ಕಲೆ ಗೀಳು ಅತ್ತಿಕೊಂಡಿತು, ದೊಡ್ಡಪ್ಪನ ನಾಟಕ ನಿರ್ದೇಶನದಲ್ಲಿ ನಾಟಕವನ್ನು ಮಾಡಿದ್ದರು, ಮುಂದೆ ದೊಡ್ಡಪ್ಪನ ಹಾಗೆ ನಾಟಕದ ಮಾಸ್ಟರ್ ಆಗಬೇಕೆಂದು ಕೊಂಡಿದ್ದರು, ಒಂದು “ಸ್ವಾರ್ಥಿಗಳ ಲೋಕದಲ್ಲಿ” ಎಂಬ ಸಾಮಾಜಿಕ ನಾಟಕವನ್ನು ನಿರ್ದೇಶಿಸಿ ಅಭಿನಯಿಸಿದ್ದರು, ಕಲೆಯ ಮೇಲಿನ ಆಸಕ್ತಿಯಿಂದ ಕಥೆ, ಕವನ, ಹಾಡುಗಳನ್ನು ಬರೆಯುವುದನ್ನು ಕಲಿತರು.MAVUTA Director Ravishankar nag ಇವರು ಶಂಕರನಾಗ್ ರವರ ಅಪ್ಪಟ ಅಭಿಮಾನಿಯಾಗಿದ್ದು ಅವರ ಚಿತ್ರಗಳನ್ನ ನೋಡುತ್ತಲೇ ಚಿತ್ರರಂಗದಲ್ಲಿ ಆಸಕ್ತಿ ಬೆಳೆಯುತ್ತ ಹೋಗುತ್ತದೆ, ನಂತರ ನಾಟಕ ನಿರ್ದೇಶನದಿಂದ ಸಿನೆಮಾ ನಿರ್ದೇಶನದತ್ತ ಆಸಕ್ತಿ ಬೆಳೆದು ಕಷ್ಟ ಪಟ್ಟು ಬಿ ಎ ವಿದ್ಯಾಭ್ಯಾಸವನ್ನು ಮುಗಿಸಿ ಅವರು ಬರೆದ ಕಥೆ ಕವನ ಹಾಡುಗಳ ಹಿಡಿದುಕೊಂಡು ಗಾಂಧಿನಗರದ ಕಡೆ ಹೆಜ್ಜೆ ಹಾಕಿದರು.MAVUTA Director Ravishankar nag

ದೂರದ ಬೆಟ್ಟ ನುಣ್ಣಗೆ ಎಂಬಂತೆ ಅವರು ಗಾಂಧಿನಗರಕ್ಕೆ ಬಂದಾಗಲೇ ಸಿನಿಮಾ ಸೇರುವುದು ಎಷ್ಟು ಕಷ್ಟ ಎಂದು ತಿಳಿದಿದ್ದು. ಯಾರೊಬ್ಬರ ಪರಿಚಯವು ಇಲ್ಲದೆ, ನಂಬಿಕೆ ಇಲ್ಲದವರ ನಂಬಿ ತಂದಿದ್ದ ಪುಡಿಗಸು ಖಾಲಿಯಾದಾಗ ಊರಿಗೆ ಹಿಂತಿರುಗಿ ಹೋಗಬೇಕು ಎನ್ನುವಾಗ ಹೋಗಲು ಮನಸು ಬಾರದೆ ಪಟ್ಟಂದೂರು ಅಗ್ರಹಾರದ ಸ್ನೇಹಿತರ ರೂಮ್ನಲ್ಲಿ ಇದ್ದುಕೊಂಡು ITPL ಇಂಡಸ್ಟ್ರಿಯಲ್ ಏರಿಯದ ಫ್ಯಾಕ್ಟರಿ ಗಳಲ್ಲಿ ಕೆಲಸಕ್ಕೆ ಸೇರಿ ರಜಾ ದಿನಗಳಲ್ಲಿ ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದು ಅಲೆದು ಮೂರ್ನಾಲ್ಕು ವರ್ಷಗಳು ಕಳೆದೆ ಹೋಗುತ್ತವೆ.MAVUTA Director Ravishankar nag

ಒಮ್ಮೆ ಗಾಂಧಿನಗರದಲ್ಲಿ ಸೀರಿಯಲ್ ಮ್ಯಾನೇಜರ್ ಒಬ್ಬರ ಪರಿಚಯವಾಗಿ ಅವರ ಬಳಿ ನನ್ನ ಬಗ್ಗೆ ಹೇಳಿಕೊಂಡಾಗ ಅವರು “ಡಿಟೇಕ್ಟಿವ್ ಧನುಷ್” ಎಂಬ ಸೀರಿಯಲ್ ನಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಅವಕಾಶ ಕೊಟ್ಟರು, ಹೀಗೆ ಮುಂದುವರಿಯುತ್ತ ಗೆಜ್ಜೆನಾದ ವಿಜಯ್ ಕುಮಾರ್ ನಿರ್ದೇಶನದ ” ಮೇಘ ಮಂದಾರ ” ಎಂಬ ಸೀರಿಯಲ್ ಗೆ ಜೂನಿಯರ್ ಆರ್ಟಿಸ್ಟ್ ಆಗಿ ಹೋಗಿರಲು ಆ ದಿನ ಅಲ್ಲಿನ ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ ಕೆಲಸ ಬಿಟ್ಟು ಹೋಗಿರಲು ಆತನ ಸ್ಥಾನಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡರು.MAVUTA Director Ravishankar nag

ಅಲ್ಲಿಂದ ಸಿಂಧೂರ, ರಥಸಪ್ತಮಿ, ಅಕ್ಕ ಎಂಬ ಸೀರಿಯಲ್ ನಲ್ಲಿ ಕೆಲಸ ನಿರ್ವಹಿಸಿ ನಂತರ ಗೊರವಾಲೆ ಮಹೇಶ್ ಎಂಬ ನಿರ್ದೇಶಕರ ಸಹಕಾರದೊಂದಿಗೆ ಸಾಯಿ ಲಕ್ಷ್ಮಣ್ ನಿರ್ದೇಶನದ”ಲೈಫ್ ಸ್ಟೈಲ್ ” ಎಂಬ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಅದರಲ್ಲಿ ಒಂದು ಹಾಡನ್ನು ಕೂಡ ಬರೆದಿದ್ದರು, ಆದರೆ ಆ ಚಿತ್ರ ಅರ್ಧಕ್ಕೆ ನಿಂತು ಹೋಗುತ್ತದೆ, ನಂತರ ” ಪ್ರೀತಿಯ ಲೋಕ ” ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಅದರ ಸಂಭಾಷಣೆ, ಸಾಹಿತ್ಯವನ್ನು ಬರೆದಿದ್ದಾರೆ.MAVUTA Director Ravishankar nag

ನಂತರ “ಲವ್ ಇಸ್ ಪಾಯಿಸನ್”, ನೃತ್ಯಂ, ಕುಚುಕು, ಸಿಂಹ ಹಾಕಿದ ಹೆಜ್ಜೆ, ರೈತರಾಜ್ಯ, ಗೀತಾಂಜಲಿ, ಮಹಾರಾಜ ಕಾಲೇಜು, ಕಾಲಬ್ರಹ್ಮ, ಕಡೆಮನೆ, ಅಂತರ್ಯಾಮಿ, ಬರೀ 10 ಪರ್ಸೆಂಟ್ ಬಡ್ಡಿ, ಹೀಗೆ ಸುಮಾರು 25-30 ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ, ಸಂಭಾಷಣೆಗಾರನಾಗಿ, ಸಾಹಿತ್ಯಗಾರನಾಗಿ ಕೆಲಸ ನಿರ್ವಹಿಸಿದ್ದಾರೆ.MAVUTA Director Ravishankar nag

ಈಗ SDR ಪ್ರೊಡಕ್ಷನ್ ನಲ್ಲಿ ಕಾಡಿನ ಕಥಾ ಹಂದರವುಳ್ಳ ” ಮಾವುತ ” ಎಂಬ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ, MAVUTA Director Ravishankar Nag ಚಿತ್ರ ತುಂಬಾ ಸೊಗಸಾಗಿ ಮೂಡಿ ಬಂದಿದ್ದು, ದಸರಾಗೆ ತೆರೆಗೆ ಬರಲು ಸಜ್ಜಾಗಿದೆ ಇವರ ಮುಂದಿನ ಎಲ್ಲಾ ಚಿತ್ರಗಳಿಗೆ ಒಳ್ಳೆಯದಾಗಲಿ ಎಂದು CINIPARK ಆಶಿಸುತ್ತೇವೆ.MAVUTA Director Ravishankar nag

You Will  Love   Like  These

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…