ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಿತು “ಹೆಡ್ ಬುಷ್” ಚಿತ್ರದ ಪ್ರೀ ರಿಲೀಸ್ ಸಮಾರಂಭ

HEAD BUSH Pre-Release Event Davangere

ಡಾಲಿ ಧನಂಜಯ ಭೂಗತ ಲೋಕದ ದೊರೆ ಎಂ.ಪಿ.ಜಯರಾಜ್ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಹೆಡ್ ಬುಷ್.

ಒಂದು ಕಾಲದಲ್ಲಿ ಇಡೀ ಭೂಗತ ಲೋಕವನ್ನು ಆಳಿದ ದೊರೆಗಳ ಕಥೆ ಇದಾಗಿದ್ದು, ಅಗ್ನಿ ಶ್ರೀಧರ್ ಅವರು ಕಥೆ, ಚಿತ್ರಕಥೆ ರಚಿಸಿರುವ ಈ ಚಿತ್ರಕ್ಕೆ ಶೂನ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ಚಿತ್ರದ ಪ್ರಚಾರ ಕಾರ್ಯ ಕಳೆದ ತಿಂಗಳಿನಿಂದ ಭರ್ಜರಿಯಾಗಿ ನಡೆದಿದ್ದು, ಬರುವ ಶುಕ್ರವಾರ ಅಕ್ಟೋಬರ್ 21 ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.HEAD BUSH Pre-Release Event Davangere

ಇದರ ಅಂಗವಾಗಿ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಬೆಣ್ಣೆದೋಸೆ ನಗರಿ ಎಂದೇ ಹೆಸರಾದ ಮದ್ಯ ಕರ್ನಾಟಕದ ದಾವಣಗೆರೆ ಮಹಾನಗರದಲ್ಲಿ ಅದ್ದೂರಿಯಾಗಿ ನೆರವೇರಿತು. ಸಾಮಾನ್ಯವಾಗಿ ಬೆಂಗಳೂರು ಮಹಾನಗರದಲ್ಲೇ ಆಯೋಜನೆಗೊಳ್ಳುತ್ತಿದ್ದ ಇಂಥಹ ಪ್ರಿರಿಲೀಸ್ ಕಾರ್ಯಕ್ರಮ, ಬೆಂಗಳೂರಿನ ಹೊರಗಡೆ ನಡೆದದ್ದು ವಿಶೇಷ. ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಕಿಕ್ಕಿರಿದು ಸೇರಿದ್ದ ಜನಸಾಗರದ ನಡುವೆ ನಡೆದ “ಹೆಡ್ ಬುಷ್” ಚಿತ್ರದ ವರ್ಣರಂಜಿತ ಕಾರ್ಯಕ್ರಮ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. ಮಳೆಯ ನಡುವೆಯೂ ಚಂದನವನದ ತಾರೆಗಳನ್ನು ದಾವಣಗೆರೆ ಜನತೆ ಕಣ್ತುಂಬಿಕೊಂಡರು.HEAD BUSH Pre-Release Event Davangere

ಮೋಹಕತಾರೆ ರಮ್ಯ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.
ಅಪ್ಪು ಸ್ಮರಣೆಯಲ್ಲೇ ಶುರುವಾದ ಸಮಾರಂಭದಲ್ಲಿ ಬೆಡಗಿ ರಚಿತಾ ರಾಮ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಅಮೃತಾ ಅಯ್ಯಂಗಾರ್, ಸಪ್ತಮಿಗೌಡ, ಸಂಜನಾ, ಕಾರ್ತೀಕ್ ಗೌಡ, ಯೋಗಿ ಜಿ.ರಾಜ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಪಾಲ್ಗೊಂಡಿದ್ದರು.HEAD BUSH Pre-Release Event Davangere

ವೇದಿಕೆಯಲ್ಲಿ ನಟಿ ರಮ್ಯ ಮಾತನಾಡುತ್ತಾ, ಈ ತಂಡದ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ. ಆದರೆ ಧನಂಜಯ್ ಅವರ ಸ್ನೇಹಕ್ಕಾಗಿ ತಾನಿಲ್ಲಿ ಬಂದಿರುವುದಾಗಿಯೂ, ದಾವಣಗೆರೆ ಬೆಣ್ಣೆದೋಸೆ ನನಗೆ ತುಂಬಾ ಇಷ್ಟ ಎಂದೂ ಹೇಳಿದರು. ನಂತರ ಚಿತ್ರದ ಹಾಡೊಂದಕ್ಕೆ ಲಾಂಗ್ ಹಿಡಿದುಕೊಂಡೇ ಬಂದ ನಾಯಕ ಧನಂಜಯ ಮಾತನಾಡಿ, ನಾನು ನನ್ನ ಪ್ರತಿ ಚಿತ್ರದಲ್ಲೂ ಸಹ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಲೆ ಬಂದಿದ್ದೇನೆ.HEAD BUSH Pre-Release Event Davangere

ಹಿಂದಿನ ಬಡವ ರಾಸ್ಕಲ್ ಚಿತ್ರದಲ್ಲಿ ಶಂಕರ್ ಗುರು ಅವರಿಗೆ ಅವಕಾಶ ಕೊಟ್ಟಹಾಗೆ ಈ ಚಿತ್ರದಲ್ಲೂ ಸಹ ಶೂನ್ಯ ಅವರಿಗೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದೇನೆ. ಅಲ್ಲದೆ ನನ್ನ ಮುಂದಿನ ಚಿತ್ರ ಟಗರು ಪಲ್ಯಾ ಚಿತ್ರದಲ್ಲೂ ಸಹ ಮತ್ತೊಬ್ಬ ಯುವಪ್ರತಿಭೆಗೆ ನಿರ್ದೇಶನದ ಅವಕಾಶ ನೀಡಿದ್ದೇನೆ. ಹೆಡ್ ಬುಷ್ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ದಾವಣಗೆರೆ ಜನತೆ ಕನ್ನಡ ಚಿತ್ರಗಳನ್ನು ಯಾವಾಗಲೂ ಪೋಷಿಸುತ್ತಲೇ ಬಂದಿದ್ದಾರೆ.HEAD BUSH Pre-Release Event Davangere

ಅದಕ್ಕಾಗಿಯೇ ನಾವೆಲ್ಲ ನಿಮ್ಮ ಮನೆ ಬಾಗಿಲಿಗೇ ಬಂದಿದ್ದೇವೆ. ದಯವಿಟ್ಟು ನಮ್ಮ ಸಿನಿಮಾವನ್ನು ನೋಡಿ ಹರಸಿ ಎಂದು ದಾವಣಗೆರೆ ಮಹಾಜನತೆಯಲ್ಲಿ ಮನವಿ ಮಾಡಿಕೊಂಡರು.HEAD BUSH Pre-Release Event Davangere ನಾಯಕಿ ಪಾಯಲ್ ರಜಪೂತ್ ಮಾತನಾಡಿ ಕನ್ನಡ ನೆಲ ಇಲ್ಲಿನ ಸಂಸ್ಕ್ರತಿ ನನಗಿಷ್ಟ. ಈ ಸಿನಿಮಾ ನನಗೆ ತುಂಬಾನೇ ಪ್ರಮುಖ. ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಿದ್ದೇನೆ ಎಂದರು. ಸುಮಾರು ೪ ಗಂಟೆಗಳ ಕಾಲ‌ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷ ನೃತ್ಯಗಾಯನ ಸೇರಿದಂತೆ ಹಲವಾರು ಮನರಂಜನಾ ಕಾರ್ಯಕ್ರಮಗಳು ನಡೆದವು.HEAD BUSH Pre-Release Event Davangere

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…