ಸೌಜನ್ಯ ಕೇಸ್‌ನಲ್ಲಿ ಇವರಿಗೆ ನ್ಯಾಯ ಬೇಕಂತೆ ಎಂಥಾ ಜೋಕ್ ನೋಡಿ ; ದರ್ಶನ್ ವಿರುದ್ದ ರಮ್ಯಾ ಧಗಧಗ

RAMYA DARSHAN

ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು.Darshan-Sawjanya-and-Ramya

ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನ ಹಾಗೂ ಭಗ್ನ ಪ್ರೇಮಿಗಳನ್ನ ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯ ಮೋಹಕತಾರೆ ಎಂಬ ಪಟ್ಟವನ್ನ ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು. Darshan-sawjanya-and-Ramya ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಎಂಬ ಹೆಗ್ಗಳಿಕೆಗೂ ರಾಷ್ಟ್ರ ರಾಜಕಾರಣದಲ್ಲಿ ರಮ್ಯ ಪಾತ್ರವಾದರು.Darshan-sawjanya-and-Ramya

ಇಂಥಾ ರಮ್ಯಾ ಮೊನ್ನೆ ಮೊನ್ನೆಯಷ್ಟೇ ಮತ್ತೊಮ್ಮೆ ದರ್ಶನ್ ವಿರುದ್ದ ಕೆಂಡ ಕಾರಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ರಮ್ಯಾ ಅವರ ಈ ಮಾತು ಸಹಜವಾಗಿ ದರ್ಶನ್ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಮುಂದೆ ಏನೆಲ್ಲಾ ಆಯ್ತು ಎಂದು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಿಲ್ಲ.Devil Darshan Kannada Movie

ತಮ್ಮ ಮೇಲೆ ನಡೆದ ನಿರಂತರ ಸೈಬರ್ ದಾಳಿಯಿಂದ ಕಂಗಾಲಾದ ರಮ್ಯಾ ನಿನ್ನೆ ಮತ್ತೊಮ್ಮೆ ‌ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಅಭಿಮಾನದ‌ ಸೋಗಿನಲ್ಲಿ ದರ್ಶನ್ ಅವರ ಕೆಲ ಅಂಧಾಭಿಮಾನಿಗಳನ್ನು ಉದ್ದೇಶಿಸಿ ಮತ್ತೊಂದು ಫೋಸ್ಟ್ ಹಂಚಿಕೊಂಡಿದ್ದರು. ನಿಮ್ಮ ಯೋಗ್ಯತೆ ಇಷ್ಟೇ ಎಂದು ಕಿಡಿ ಕಾರಿದ್ದರು. ಇದೀಗ ರಮ್ಯಾ ಮತ್ತೊಮ್ಮೆ ಧಗಧಗಿಸಿದ್ದಾರೆ. ನಾನು ಯಾವ ನನ್ ಮಗನಿಗೆ ಹೆದರಲ್ಲ ಎಂದು ಹೇಳಿದ್ದಾರೆ.Darshan-sawjanya-and-Ramya

ಈ ಕುರಿತು ”ನ್ಯೂಸ್ ಫಸ್ಟ್” ಜೊತೆ ಮಾತನಾಡಿರುವ ರಮ್ಯಾ ನನಗೆ ಮಾತ್ರ ಅಲ್ಲ ಮೊದಲಿಂದ ಅವರು ಸುದೀಪ್ ಆಗಲಿ, ಯಶ್ ಆಗಲಿ, ಅವರ ಹೆಂಡತಿ‌ ಮಕ್ಕಳನ್ನು ಕೂಡ ಬಿಟ್ಟಿಲ್ಲ ಎಂದು ಹೇಳಿದ್ದಾರೆ. ಯಾವಾಗಲೂ ಅಶ್ಲೀಲ ಪದಗಳನ್ನೇ ಬಳಸುತ್ತಾ ಬಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ.Darshan-sawjanya-and-Ramya

ಮುಂದುವರೆದು ರೇಣುಕಾಸ್ವಾಮಿ ಅವರಿಗೂ ಇವರಿಗೂ ಏನು ವ್ಯತ್ಯಾಸ ಇದೆ ಎಂದು ಕೇಳಿರುವ ರಮ್ಯಾ, ನಾನು ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯ ಕುರಿತು ಮಾತನಾಡಿದ್ದೇ, ಅಷ್ಟಕ್ಕೇ ನನಗೆ ಸಾಕಷ್ಟು ಮೆಸೇಜ್ ಗಳು ಬಂದಿವೆ ಆ ಮೆಸೇಜ್ ಗಳನ್ನು ನಾನು ಅವರ ಮುಖವಾಡ ಕಳಚಲೆಂದೇ ಹಾಕಿದ್ದೀನಿ ಎಂದು ಹೇಳಿದ್ದಾರೆ.Darshan-sawjanya-and-Ramya

ಇಂಥವರಿಂದಲೇ ನಮ್ಮ ಸಮಾಜ ಹಾಳಾಗುತ್ತಿದೆ ಎಂದು ಹೇಳಿರುವ ರಮ್ಯಾ, ಸಮಾಜಕ್ಕೆ ನಾವು ಯಾವ ರೀತಿ ಸಂದೇಶವನ್ನು ಕೊಡುತ್ತಿದ್ದೇವೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಮಾಜದಲ್ಲಿ ಹೆಣ್ಮಕ್ಕಳು ಸೇಫ್ ಇಲ್ಲವೇ ಇಲ್ಲ ಬಿಡಿ ಇಂಥವರಿಂದಲೇ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿರುವುದು ಎಂದು ಹೇಳಿದ್ದಾರೆ. ಇವರಿಗೆ ಸೌಜನ್ಯ ಕೇಸ್‌ನಲ್ಲಿ ನ್ಯಾಯ ಬೇಕು ಅಂತೇ ಎಂಥಾ ಜೋಕ್ ನೋಡಿ ಎಂದು ಕೂಡ ರಮ್ಯಾ ”ನ್ಯೂಸ್‌ ಫಸ್ಟ್‌” ಜೊತೆ ನಡೆಸಿದ ಈ ಮಾತುಕಥೆಯಲ್ಲಿ ಹೇಳಿದ್ದಾರೆ.Darshan-sawjanya-and-Ramya

ಮುಂದುವರೆದು ನನಗೆ ತುಂಬಾ ಜನ ಬೆಂಬಲ ಕೊಟ್ಟಿದ್ದಾರೆ, ಮೆಸೇಜ್ ಎಲ್ಲಾ ಮಾಡಿದ್ದಾರೆ ಎಂದು ಹೇಳಿರುವ ರಮ್ಯಾ ನಿಮಗೆಲ್ಲಾ ನಾನು ಹೇಗೆ ಅಂತ ಗೊತ್ತು, ಬೆಂಬಲ ಇರಲಿ.. ಇಲ್ಲದಿರಲಿ.. ನಾನು ಯಾವತ್ತು ಅನ್ಯಾಯದ ವಿರುದ್ದ ಹೋರಾಡುತ್ತೇನೆ ಎಂದು ಹೇಳಿದ್ದಾರೆ. ಇವರೆಲ್ಲರ ಮುಖವಾಡ ನಾನು ಕಳಚಿ ತೀರುತ್ತೇನೆ ಎಂದು ಶಪಥವನ್ನು ಕೂಡ ಮಾಡಿದ್ದಾರೆ.Mystery of Dharmasthala: 11 years and many probes later, no trace of teen's  killer - The Hindu

ಯಶ್ ಅವರ ಮಕ್ಕಳನ್ನು ಕೂಡ ಇವರು ಬಿಟ್ಟಿಲ್ಲ, ಈ ಕುರಿತು ನಾನು ಎರಡು ವರ್ಷದ ಹಿಂದೆ ಫೋಸ್ಟ್ ಮಾಡಿದ್ದೇ ಅಷ್ಟು ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಹೇಳಿರುವ ರಮ್ಯಾ ”ಫ್ಯಾನ್ ವಾರ್‌”ನಾ ನಾನು ಅರ್ಥ ಮಾಡಿಕೊಳ್ಳಬಲ್ಲೇ ಆದರೆ ಈ ಥರ, ಈ ಥರ ಸಮಾಜದಲ್ಲಿ ನಾವು ಸುಮ್ಮನೆ ಇರಬೇಕಾ ? ಹೆದರಿಕೊಂಡು.. ಇವತ್ತು ತಪ್ಪು ಮಾಡೋರು ಯಾರು ಹೆದರುತ್ತಿಲ್ಲ. ತಪ್ಪು ಮಾಡದಿರುವವರು ಹೆದರಿಕೊಂಡು ಕುಳಿತುಕೊಂಡಿದ್ದಾರೆ. ಯಾವ ವಿಷ್ಯದ ಬಗ್ಗೆನೂ ಮಾತನಾಡುತ್ತಿಲ್ಲ ಎಂದು ತಮ್ಮ ಮನದ ನೋವು, ಬೇಸರವನ್ನು ಹೊರಹಾಕಿದ್ದಾರೆ.Sowjanya murder case video: YouTuber Sameer MD booked for offending  religious sentiments

You Will  Love   Like  These

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…