ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.. 

ಶ್ರೀಕೃಷ್ಣ ನಿಮ್ಮ ಮನೆಗೆ ಬಂದು, ನಿಮ್ಮೆಲ್ಲಾ ದುಃಖ, ಬೇಸರ, ನೋವುಗಳನ್ನು ದೂರ ಮಾಡಲಿ. ನಿಮ್ಮ ಮನೆಯಲ್ಲಿ ಹರ್ಷದ ವಾತಾವರಣ ತುಂಬಿ ತುಳುಕುವಂತೆ ಮಾಡಲಿ. 

ಅಧರ್ಮದಿಂದ ಶತ್ರು ಕೆಲವೊಮ್ಮೆ ಗೆಲ್ಲಬಹುದು. ಆದರೆ, ಕರ್ಮ ಎದುರಾಗುವ ವೇಳೆಗೆ ಧರ್ಮ ಅವನನ್ನು ಸುಡಲು ಪ್ರಾರಂಭಿಸುತ್ತದೆ. ಅವನ ನಿರ್ಣಾಮವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.. 

ಧರ್ಮೋ ರಕ್ಷತಿ ರಕ್ಷಿತಃ - ಧರ್ಮವನ್ನು ರಕ್ಷಿಸುವವರನ್ನು ಧರ್ಮವೇ ರಕ್ಷಿಸುತ್ತದೆ. 

ಮಹಾಭಾರತದಲ್ಲಿ ಅರ್ಜುನನಿಗೆ ದಾರಿ ತೋರಿಸಿದ ಶ್ರೀ ಕೃಷ್ಣನು ನಿಮ್ಮ ಜೀವನದಲ್ಲಿಯೂ ದಾರಿ ತೋರಲಿ. ಕಷ್ಟವನ್ನು ದೂರ ಮಾಡಿ ಬದುಕನ್ನು ಸುಖಮಯವನ್ನಾಗಿಸಲಿ.